Advertisement

ರೈಲ್ವೆಯ ವನಿತಾ ಕ್ರಿಕೆಟ್‌ ಆಟಗಾರ್ತಿಯರಿಗೆ ಭಡ್ತಿ

09:39 AM Jul 24, 2017 | Team Udayavani |

ಹೊಸದಿಲ್ಲಿ: ರೈಲ್ವೆಯಲ್ಲಿ ಉದ್ಯೋಗದಲ್ಲಿರುವ ಭಾರತೀಯ ವಿಶ್ವಕಪ್‌ ತಂಡದ ವನಿತಾ ಕ್ರಿಕೆ‌ಟ್‌ ಆಟಗಾರ್ತಿಯರಿಗೆ ವಿಶೇಷ ಆದ್ಯತೆ ನೆಲೆಯಲ್ಲಿ ಭಡ್ತಿ ನೀಡಲಾಗುವುದು ಎಂದು ರೈಲ್ವೆ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ.

Advertisement

ನಾಯಕಿ ಮಿಥಾಲಿ ರಾಜ್‌ ಮತ್ತು ಉಪನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಸಹಿತ ಭಾರತೀಯ ತಂಡದ 10 ಮಂದಿ ರೈಲ್ವೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಭಡ್ತಿ ಮಾತ್ರವಲ್ಲದೇ ಈ ಆಟಗಾರ್ತಿಯರಿಗೆ ನಗದು ಬಹುಮಾನ ನೀಡಲಾಗುವುದು ಎಂದವರು ತಿಳಿಸಿದರು. ಮಿಥಾಲಿ, ಹರ್ಮನ್‌ಪ್ರೀತ್‌ ಅವರಲ್ಲದೇ ಏಕ್ತ ಬಿಸ್ತ್, ಪೂನಂ ರಾವತ್‌, ವೇದ ಕೃಷ್ಣಮೂರ್ತಿ, ಪೂನಂ ಯಾದವ್‌, ಸುಷ್ಮಾ ವರ್ಮ, ಮೊನಾ ಮೆಶ್ರಾಮ್‌, ರಾಜೇಶ್ವರಿ ಗಾಯಕ್ವಾಡ್‌ ಮತ್ತು ನುಝಾತ್‌ ಪರ್ವೀನ್‌ ರೈಲ್ವೆಯಲ್ಲಿ ಉದ್ಯೋಗಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next