Advertisement

Railway Track: ಮುಂದುವರಿದ ಮಣ್ಣು ತೆರವು ಕಾರ್ಯಾಚರಣೆ

12:46 AM Aug 18, 2024 | Team Udayavani |

ಸುಬ್ರಹ್ಮಣ್ಯ: ಮಂಗಳೂರು – ಬೆಂಗಳೂರು ರೈಲು ಮಾರ್ಗದ ಸಕಲೇಶಪುರ – ಬಳ್ಳುಪೇಟೆ ರೈಲು ನಿಲ್ದಾಣದ ನಡುವಿನ ಸಕಲೇಶಪುರ ಸಮೀಪ ರೈಲು ಮಾರ್ಗಕ್ಕೆ ಮತ್ತೆ ಗುಡ್ಡ ಕುಸಿತಗೊಂಡಿದ್ದ ಮಣ್ಣನ್ನು ತೆರವು ಮಾಡುವ ಕಾರ್ಯಾಚರಣೆ ಶನಿವಾರವೂ ಮುಂದುವರಿಯಿತು.

Advertisement

ಕೆಲ ದಿನಗಳ ಹಿಂದೆ ಗುಡ್ಡ ಕುಸಿದ ಪ್ರದೇಶದಲ್ಲೇ ಶುಕ್ರವಾರ ಮತ್ತೆ ಮಣ್ಣು ಕುಸಿದಿದ್ದು, ಪರಿಣಾಮ ಮತ್ತೆ ರೈಲು ಸಂಚಾರ ಸ್ಥಗಿತ ಮಾಡಲಾಗಿದ್ದು, ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಘಟನೆ ಸಂಭವಿಸಿದ ಸ್ಥಳದಲ್ಲಿ ಎರಡೂ ಕಡೆಗಳಲ್ಲೂ ಮಣ್ಣು ಕುಸಿಯುತ್ತಿದ್ದು, ಒಂದು ಭಾಗದಿಂದ ಮಣ್ಣು ಕುಸಿತ ಭೀತಿ ಇನ್ನೂ ನಿಂತಿಲ್ಲ. ಮೇಲ್ಭಾಗದಿಂದ ಮತ್ತೆ ಮತ್ತೆ ಮಣ್ಣು ಕುಸಿಯುತ್ತಿದ್ದು, ಕಾರ್ಯಾಚರಣೆ ನಡೆಸಲು ಸವಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ ಭಾಗದಲ್ಲಿ ಮಳೆಯೂ ಆಗುತ್ತಿರುವುದರಿಂದ ಮಣ್ಣು ತೆರವು ಹಾಗೂ ಗೈಬಿಯನ್‌ ಗೋಡೆ ಕಾಮಗಾರಿಗೂ ಅಡಚಣೆ ಉಂಟಾಗಿದೆ. ಇದರಿಂದ ಇನ್ನೂ ರೈಲು ಸಂಚಾರ ಸ್ಥಗಿತ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next