Advertisement

Kalaburagi ರೈಲ್ವೆ ವಲಯ ಸ್ಥಾಪಿಸುವ ಪ್ರಸ್ತಾವ ಕೇಂದ್ರದ ಮುಂದಿಲ್ಲ: ಕೇಂದ್ರ ಸಚಿವ

09:57 PM Jul 24, 2024 | Team Udayavani |

ನವದೆಹಲಿ: ನೂತನವಾಗಿ ಕಲಬುರಗಿ ರೈಲ್ವೆ ವಲಯ ಸ್ಥಾಪಿಸುವ ಯಾವುದೇ ಪ್ರಸ್ತಾವ ಕೇಂದ್ರದ ಮುಂದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಸ್ಪಷ್ಟಪಡಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಪ್ರಶ್ನೆ ಉತ್ತರಿಸಿದ ರೈಲ್ವೇ ಸಚಿವರು, ಈ ಮೊದಲು ರೈಲ್ವೆ ವಲಯಕ್ಕೆ ಸಂಬಂಧಿಸಿದ ಪ್ರಸ್ತಾವ ಎದುರದಾಗ ಮೂವರು ಹಿರಿಯ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಲಾಗಿತ್ತು.

ಈ ಸಮಿತಿಯು ಕಲುಬುರಗಿಗೆ ರೈಲ್ವೆ ವಲಯದ ಅವಶ್ಯಕತೆಯಿಲ್ಲ ಎಂದು ಶಿಫಾರಸು ಮಾಡಿತ್ತು. ಹೀಗಾಗಿ, ಈ ಪ್ರಸ್ತಾಪ ಕೈಬಿಡಲಾಗಿದೆ. ರೈಲ್ವೆ ವಲಯ ಸ್ಥಾಪನೆಗೆ ಅಗತ್ಯ ಜಮೀನು ಲಭ್ಯವಿರುವುದರಿಂದ ಮತ್ತು ವಲಯದ ಅಗತ್ಯವಿರುವುದರಿಂದ ಈ ಬಗ್ಗೆ ಕೇಂದ್ರ ಗಮನಹರಿಸಬೇಕು ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Nityananda Rai: ಕಾಶ್ಮೀರದ ಉಗ್ರರು ಜೈಲಿಗೆ ಇಲ್ಲವೇ ನರಕಕ್ಕೆ: ಸಚಿವ ನಿತ್ಯಾನಂದ ರಾಯ್‌

Advertisement

Udayavani is now on Telegram. Click here to join our channel and stay updated with the latest news.

Next