Advertisement

Amrit Bharat Station ನಿಲ್ದಾಣ ಯೋಜನೆಗೆ ಉಡುಪಿ ರೈಲ್ವೆ ನಿಲ್ದಾಣ ಸೇರ್ಪಡೆ

04:01 PM Jan 18, 2024 | Team Udayavani |

ನವದೆಹಲಿ: ಭಾರತೀಯ ರೈಲ್ವೆ ನಿಲ್ದಾಣಗಳ ಪುನರ್ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ “ಅಮೃತ್‌ ಭಾರತ್‌ ಯೋಜನೆ”ಗೆ ಉಡುಪಿಯ ರೈಲು ನಿಲ್ದಾಣ ಸೇರ್ಪಡೆಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Tragedy: ಹೃದಯಾಘಾತಗೊಂಡು ಕೋಚಿಂಗ್ ಸೆಂಟರ್ ನಲ್ಲೆ ಕುಸಿದು ಬಿದ್ದ ವಿದ್ಯಾರ್ಥಿ…

ಉಡುಪಿಯ ರೈಲು ನಿಲ್ದಾಣ ಕೊಂಕಣ್‌ ರೈಲ್ವೆ ಕಾರ್ಪೋರೇಶನ್‌ ಲಿಮಿಟೆಡ್‌ (KRCL) ವ್ಯಾಪ್ತಿಗೆ ಒಳಪಟ್ಟಿದೆ. ಇದೀಗ ಉಡುಪಿ ರೈಲು ನಿಲ್ದಾಣವನ್ನು ಅಮೃತ್‌ ಭಾರತ್‌ ಯೋಜನೆಗೆ ಸೇರ್ಪಡೆಗೊಳಿಸಿರುವ ಬಗ್ಗೆ ರೈಲ್ವೆ ಸಚಿವಾಲಯ ಕೆಆರ್‌ ಸಿಎಲ್‌ ಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಉಡುಪಿ ರೈಲು ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಬೇಕೆಂಬ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಗೆ ಸಂಸದೆ, ಸಚಿವೆ ಶೋಭಾ ಕರಂದ್ಲಾಜೆ ಅಭಿನಂದನೆ ಸಲ್ಲಿಸಿದ್ದಾರೆ.

2023ರಲ್ಲಿ ಆರಂಭಿಕವಾಗಿ ಅಮೃತ್‌ ಭಾರತ್‌ ಯೋಜನೆಯನ್ನು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ ನಲ್ಲಿ ಘೋಷಿಸಿತ್ತು. ಇದರಲ್ಲಿ ಭಾರತದ 1,275 ರೈಲ್ವೆ ನಿಲ್ದಾಣಗಳು ಸೇರ್ಪಡೆಗೊಂಡಿದ್ದು, ಕರ್ನಾಟಕದ 8 ರೈಲ್ವೆ ನಿಲ್ದಾಣಕ್ಕೂ ಪುನರಾಭಿವೃದ್ಧಿಯ ಅವಕಾಶ ಒದಗಿಬಂದಿತ್ತು. ಆದರೆ ಈ ಸಂದರ್ಭದಲ್ಲಿ ಉಡುಪಿ ರೈಲ್ವೆ ನಿಲ್ದಾಣದ ಹೆಸರು ಕೈತಪ್ಪಿ ಹೋಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next