Advertisement

Railway Development: ರಾಜ್ಯದಲ್ಲಿ ರೈಲ್ವೇ ಕ್ರಾಂತಿಗೆ ಬದ್ಧ: ಕೇಂದ್ರ ಸಚಿವ ಸೋಮಣ್ಣ

01:23 AM Sep 28, 2024 | Team Udayavani |

ತುಮಕೂರು: ರೈಲ್ವೇ ಖಾತೆ ರಾಜ್ಯ ಸಚಿವರಾಗಿ ರಾಜ್ಯದಲ್ಲಿ ಇಲಾಖೆಗೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರೈಲ್ವೇ ಕ್ರಾಂತಿ ಮಾಡಲು ಬದ್ಧವಾಗಿರುವುದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು.

Advertisement

ನಗರದ ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರ ತುಮಕೂರು-ಯಶವಂತಪುರ ಹೊಸ ಮೆಮು ರೈಲಿಗೆ ಚಾಲನೆ ನೀಡಿ ಮಾತನಾಡಿ, ನನ್ನ ಅವಧಿ
ಯಲ್ಲಿ ರಾಜ್ಯದಲ್ಲಿ ನನೆಗುದಿಗೆ, ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ರೈಲ್ವೇ ಕ್ರಾಂತಿ ಮಾಡುವೆ. 2027ರ ಮಾರ್ಚ್‌ ಒಳಗೆ ರಾಯದುರ್ಗ-ತುಮಕೂರು, ದಾವಣಗೆರೆ- ತುಮಕೂರು ರೈಲ್ವೇ ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಬೆಂಗಳೂರಿಗೆ ಸಬ್‌ಅರ್ಬನ್‌ ರೈಲು ಸೇವೆ ಒದಗಿಸಲು ಈಗಾಗಲೇ ರೈಲ್ವೇ ಸಚಿವರೊಂದಿಗೆ ಚರ್ಚಿಸಿದ್ದು, 2025ರೊಳಗೆ 2 ಹಂತದ ಸಬ್‌ಅರ್ಬನ್‌ ರೈಲುಗಳನ್ನು ಲೋಕಾರ್ಪಣೆ ಮಾಡಲಾಗುವುದು. ತುಮಕೂರು-ಅರಸೀಕೆರೆ ಮಾರ್ಗದಲ್ಲಿ ಸ್ವಯಂಪ್ರೇರಿತ ಸಿಗ್ನಲ್‌ ಸಹ ಅಳವಡಿಸಲು ಹಾಗೂ ತುಮಕೂರು-ಬೆಂಗಳೂರು ಮಾರ್ಗದ 2 ಪಥದ ರೈಲ್ವೇ ಹಳಿಗಳನ್ನು 4 ಲೈನ್‌ಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಡಬಲ್‌ ಗೇಮ್‌ ಆಡುವುದು ಗೊತ್ತಿಲ್ಲ. ನನಗೂ ತುಂಬಾ ಶತ್ರುಗಳಿ¨ªಾರೆ, ನನ್ನ ಅನುಭವದ ಮೂಲಕ ನಿಭಾಯಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next