Advertisement

ಪ್ರೀತಿಸಿ ಮದುವೆಯಾದ ಪ್ರತೀಕಾರ : ಯುವಕನ ಕುಟುಂಬದ ಐವರ ಹತ್ಯೆ!

10:58 AM Jul 12, 2020 | sudhir |

ರಾಯಚೂರು: ಪ್ರೀತಿಸಿ ಮದುವೆಯಾದುದನ್ನು ಒಪ್ಪಿ ಕೊಳ್ಳದೇ ಹಗೆ ಸಾಧಿಸಿದ ಯುವತಿ ಕುಟುಂಬದವರು ಬೀಗರ ಮನೆಯ ಐದು ಮಂದಿಯನ್ನು ಹಾಡಹಗಲೇ ಹತ್ಯೆ ಮಾಡಿದ ಘಟನೆ ಸಿಂಧನೂರಿನ ಸುಕಾಲಪೇಟೆಯಲ್ಲಿ ಶನಿವಾರ ಸಂಭವಿಸಿದೆ.

Advertisement

ಹುಡುಗನ ತಾಯಿ ಸುಮಿತ್ರಮ್ಮ (55), ಸಹೋದರರಾದ ನಾಗರಾಜ (38), ಹನುಮೇಶ (40) ಹಾಗೂ ಸಹೋದರಿ ಶ್ರೀದೇವಿ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂದೆ ಈರಪ್ಪ (65) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟರು. ಇನ್ನಿಬ್ಬರು ಸಹೋ ದರಿಯರಾದ ರೇವತಿ (20) ಹಾಗೂ ತಾಯಮ್ಮ (25) ಕೂಡ ಗಾಯಗೊಂಡಿದ್ದಾರೆ.

ಘಟನೆ ವಿವರ
ಒಂದೇ ಜಾತಿಯ ಮೌನೇಶ (21) ಹಾಗೂ ಮಂಜುಳಾ (18) ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. 8 ತಿಂಗಳ ಹಿಂದೆ ಗದಗನಲ್ಲಿ ಗೌಪ್ಯ ವಾಗಿ ಮದುವೆಯಾಗಿದ್ದರು. ಈ ವಿವಾಹವನ್ನು ಯುವತಿ ಮನೆಯವರು ಒಪ್ಪಿಕೊಂಡಿರಲಿಲ್ಲ. ಆದರೆ ಶನಿವಾರ ನೂತನ ದಂಪತಿ ಯುವತಿಯ ಮನೆಗೆ ಹೋಗಿದ್ದರು. ಇದನ್ನು ಸಹಿಸದ ಆಕೆಯ ಮನೆಯವರು ರೇಗಾಡಿದ್ದರು. ಹೀಗಾಗಿ ಜೀವಭಯದಿಂದ ದಂಪತಿ ಠಾಣೆಗೆ ದೂರು ನೀಡಲು ಹೋಗಿದ್ದರು. ಇದರಿಂದ ಆಕ್ರೋಶಗೊಂಡ ಯುವತಿ ಮನೆಯವರು ಹುಡುಗನ ಮನೆಗೆ ಬಂದು ಗಲಾಟೆ ಮಾಡಿದ್ದಲ್ಲದೇ ರಾಡು, ಕಟ್ಟಿಗೆಯಿಂದ ಹಲ್ಲೆ ಮಾಡಿ ಹತ್ಯೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಯುವತಿ ಮನೆಯ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next