Advertisement

ಚನ್ನ ಬಸವೇಶ್ವರ ಗೋಶಾಲೆಗೆ ಜಾನುವಾರು ಬಿಡಲು ಮನವಿ

12:30 PM May 04, 2020 | Naveen |

ರಾಯಚೂರು: ಸಿಂಧನೂರು ತಾಲೂಕು ಯದ್ದಲದೊಡ್ಡಿಯಲ್ಲಿರುವ ಚನ್ನಬಸವ ಶಿವಯೋಗಿಗಳ ಗೋಶಾಲೆಯಲ್ಲಿ ಸುಮಾರು 800 ಗೋವುಗಳಿಗೆ ಸ್ಥಳಾವಕಾಶವಿದ್ದು, ನೀರು ಮತ್ತು ಮೇವಿನ ಕೊರತೆಯಿಂದ ಜಾನುವಾರು ಸಾಕಲು ತೊಂದರೆ ಎದುರುಸುತ್ತಿರುವ ರೈತರು ಮಠದ ಗೋಶಾಲೆಗೆ ಬಿಡಬಹುದು ಎಂದು ಕೋರಲಾಗಿದೆ.

Advertisement

ಈ ಕುರಿತು ಸುವರ್ಣಗಿರಿ ವಿರಕ್ತಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಮಠದ ಗೋಶಾಲೆಯಲ್ಲಿ ಸ್ಥಳಾವಕಾಶವಿದ್ದು, ಈ ಕಷ್ಟದಲ್ಲಿ ಸಾಕಲಾಗುವುದು. ಬೇಸಿಗೆ ಇರುವ ಕಾರಣ ನೀರು ಮೇವಿನ ಬವಣೆ ಶುರುವಾಗಿದೆ. ಹೀಗಾಗಿ ಮಠದಿಂದ ಈ ಕಾರ್ಯಕ್ಕೆ ಮುಂದಾಗಿದ್ದಾಗಿ ತಿಳಿಸಿದ್ದಾರೆ. ಕೋವಿಡ್ ವೈರಸ್‌ ಹರಡದಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಲ್ಲಾಡಳಿತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next