Advertisement

ರಾಯಚೂರು: ರಸ್ತೆಗಳ ದುರಸ್ತಿಗೆ ಲೋಕ ಜನಶಕ್ತಿ ಪಕ್ಷ ಒತ್ತಾಯ

01:02 PM Aug 13, 2020 | sudhir |

ರಾಯಚೂರು: ನಗರದ ವಿವಿಧ ಪ್ರಮುಖ ರಸ್ತೆಗಳು ಹಾಳಾಗಿದ್ದು, ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಲೋಕ ಜನಶಕ್ತಿ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದರು. ಜಿಲ್ಲಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದ ಕಾರ್ಯಕರ್ತರು, ನಗರದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರ ಜೀವ ಹಿಂಡುತ್ತಿವೆ. ಸ್ವಲ್ಪ ಮಳೆ ಬದರೆ ಸಾಕು ನೀರು
ಸಂಗ್ರಹಗೊಂಡು ವಾಹನ ಸವಾರರು ಗುಂಡಿಗೆ ಬೀಳುವಂತಾಗುತ್ತಿದೆ.

Advertisement

ನಗರದ ಮಹಾವೀರ ಸರ್ಕಲ್‌ ರಸ್ತೆ, ತೀನ್‌ ಕಂದೀಲ್‌ ರಸ್ತೆ, ಗದ್ವಾಲ್‌ ರಸ್ತೆ, ಪೂರ್ಣಿಮ ಚಿತ್ರಮಂದಿರ, ಬಸವನಬಾವಿ ವೃತ್ತ ಹಾಗೂ ಚಂದ್ರಮೌಳೇಶ್ವರ ವೃತ್ತದಿಂದ ತರಕಾರಿ ಮಾರುಕಟ್ಟೆಗೆ ಸಾಗುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಸಾರ್ವಜನಿಕರ
ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಆದ್ದರಿಂದ, ನಗರದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಲು ಜಿಲ್ಲಾಡಾಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖಂಡರಾದ ಎ.ಸಂದೀಪ ರೆಡ್ಡಿ, ಎಸ್‌.ಸುರೇಶ ರೆಡ್ಡಿ, ಎಸ್‌.ಶಿವಕುಮಾರ, ಮಲ್ಲನ್ನಗೌಡ, ರಾಜಶೇಖರ ರೆಡ್ಡಿ
ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next