Advertisement

Raichur; ಶಿಕ್ಷಕಿ ಜತೆ ಅನುಚಿತ ವರ್ತನೆ ತೋರಿದ ಪ್ರಭಾರ ಪ್ರಾಚಾರ್ಯ ಅಮಾನತು

05:19 PM Aug 13, 2024 | Team Udayavani |

ರಾಯಚೂರು: ತರಬೇತಿಗೆ ಆಗಮಿಸಿದ ಶಿಕ್ಷಕಿ ಜತೆಗೆ ಅನುಚಿತ ವರ್ತನೆ ತೋರಿದ್ದ ಸಮೀಪದ ಯರಮರಸ್ ಆದರ್ಶ ವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಮೆಹಬೂಬ್ ಅಲಿ ಅವರನ್ನು ಅಮಾನತು ಮಾಡಲಾಗಿದೆ.

Advertisement

ಆರೋಪಿ ಅಲಿ ಶಿಕ್ಷಕಿ ಮೊಬೈಲ್ ಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ. ಇದರಿಂದ ಶಿಕ್ಷಕಿ ಸಂಬಂಧಿಕರು ಬಂಧುಗಳು ಸೋಮವಾರ ಶಾಲೆಗೆ ತೆರಳಿ ಥಳಿಸಿದ್ದರು. ಅಲ್ಲದೇ, ಯುವತಿ ಕಾಲಿಗೆ ಬಿದ್ದ ಕ್ಷಮಾಪಣೆ ಕೋರುವಂತೆ ಮಾಡಿದ್ದರು. ತನ್ನಿಂದ ತಪ್ಪಾಗಿದೆ ಎಂದು ಕ್ಷಮಾಪಣೆ ಕೂಡ ಕೋರಿದ್ದ.

ಶಿಕ್ಷಕಿ ಇಲಾಖೆಯ ಮೇಲಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ.ಬಡಿಗೇರ್ ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣಕ್ಕೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next