Advertisement

ರಾಯಚೂರು: ನದಿ ತೀರದಲ್ಲಿ 20ಕ್ಕೂ ಹೆಚ್ಚು ಮೊಸಳೆಗಳು!; ಗ್ರಾಮಸ್ಥರು ಕಂಗಾಲು

04:33 PM Jul 26, 2023 | Team Udayavani |

ರಾಯಚೂರು: ಕೃಷ್ಣಾ ನದಿ ತಟದಲ್ಲಿ ಹತ್ತಾರು ಮೊಸಳೆಗಳು ಚಲ್ಲಾಟವಾಡುವುದನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ತಾಲೂಕಿನ ರಾಂಪುರ ಮತ್ತು ಕುರುವಕಲ ಮಧ್ಯೆದ ಕೃಷ್ಣಾ ನದಿಯ ತೀರದಲ್ಲಿ ಒಂದೇ ಕಡೆ ಸುಮಾರು 20ಕ್ಕೂ ಹೆಚ್ಚು ಮೊಸಳೆ ಕಂಡು ಬಂದಿವೆ.

Advertisement

ಮೀನುಗಾರರು ಮೀನು ಹಿಡಿಯಲು ಹೋದಾಗ ಈ ದೃಶ್ಯ ಕಂಡಿದ್ದು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಇತ್ತೀಚೆಗೆ ನದಿ ಪಾತ್ರದ ಗ್ರಾಮಗಳಿಗೆ ಮೊಸಳೆ ಕಾಟ ಹೆಚ್ಚಾಗುತ್ತಿದೆ. ಈಚೆಗೆ ರಾಂಪುರದಲ್ಲಿ ಬಾಲಕನ ಮೇಲೆ ದಾಳಿ ನಡೆಸಿತ್ತು. ಅಲ್ಲದೇ ಆಗಾಗ ಆಕಳು ಎತ್ತು ಎಮ್ಮೆ ಕುರಿಗಳನ್ನು ಎಳೆದೊಯ್ಯುತ್ತಿವೆ. ಅಲ್ಲದೇ ಶಕ್ತಿನಗರದ ಲೇಬರ್ ಕಾಲನಿಯ ಮನೆಗೆ ಮೊಸಳೆ ನುಗ್ಗಿತ್ತು. ಸ್ಥಳೀಯರು ಮೊಸಳೆ ಹಿಡಿದು ನದಿಗೆ ಬಿಟ್ಟಿದ್ದರು. ಒಂದಲ್ಲ ಒಂದು ಕಡೆ ಇಂಥ ಘಟನೆಗಳು ಮರಕಳಿಸುತ್ತಲೇ ಇವೆ. ಈಗ ಮೊಸಳೆ ಹಿಂಡು ಗ್ರಾಮಸ್ಥರು ಮಾತ್ರ ಕಂಗಾಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next