Advertisement

ರಾಯಚೂರು: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅನಾಹುತ

12:53 PM Apr 22, 2023 | Team Udayavani |

ರಾಯಚೂರು: ತಾಲೂಕಿನ ವಡ್ಲೂರು ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಲ್ಯಾಬೋರೇಟರಿ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ಮೌಲ್ಯದ ಹಾನಿ ಸಂಭವಿಸಿದೆ.

Advertisement

ಬೆಂಕಿ ಕೆನ್ನಾಲಿಗೆಗೆ ಲಕ್ಷಾಂತರ ಮೌಲ್ಯದ ಕೆಮಿಕಲ್ ಸುಟ್ಟು ಕರಕಲಾಗಿದೆ.  ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ ಹೊತ್ತಿದ್ದರಿಂದ ಸುತ್ತಲೂ ದಟ್ಟವಾದ ಹೊಗೆ ಆವರಿಸಿದೆ. ಇತರೆ ‌ಕೆಮಿಕಲ್ ಕಂಪನಿಗೂ ಬೆಂಕಿ ಆವರಿಸುವ ಆತಂಕ ಎದುರಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ 5 ಅಗ್ನಿಶಾಮಕ ತಂಡ ಕಳೆದ ಐದು ಗಂಟೆಯಿಂದ ಬೆಂಕಿ ನಂದಿಸುತ್ತಿದ್ದರೂ ಅಗ್ನಿ ತಹಬಂದಿಗೆ ಬಂದಿಲ್ಲ. ಘಟನೆಯಿಂದ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

ಇದನ್ನೂ ಓದಿ:Karnataka Election 2023: ಚುನಾವಣೆಗೆ ಪೂರ್ವಸಿದ್ಧತೆ: ಸಿಬಂದಿಗೆ 3 ಹಂತದಲ್ಲಿ ತರಬೇತಿ

Advertisement

Udayavani is now on Telegram. Click here to join our channel and stay updated with the latest news.

Next