Advertisement

Raichur: ಲಂಚ ನೀಡದ್ದಕ್ಕೆ ಚಾಲಕನಿಗೆ ಪೊಲೀಸ್‌ ಥಳಿತ

10:20 PM Jan 14, 2024 | Team Udayavani |

ರಾಯಚೂರು: ಚೆಕ್‌ಪೋಸ್ಟ್‌ ತಪಾಸಣೆ ವೇಳೆ ಹಣ ನೀಡದ್ದಕ್ಕೆ ಟೆಂಫೋ ವಾಹನ ಚಾಲಕನಿಗೆ ಪೊಲೀಸ್‌ ಥಳಿಸಿದ ಘಟನೆ ತಾಲೂಕಿನ ಮಂಡ್ಲಗೇರಾ ಗ್ರಾಮದಲ್ಲಿ ನಡೆದಿದೆ.

Advertisement

ತೆಲಂಗಾಣ ರಾಜ್ಯದ ಗದ್ವಾಲ್‌ ಜಿಲ್ಲೆಗೆ ಹೋಗುವ ರಸ್ತೆಯ ಮಂಡಲಗೇರಾದಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ಇದ್ದು, ಈ ಮಾರ್ಗದಲ್ಲಿ ತೆಲಂಗಾಣ ಮೂಲದ ಸುರೇಶ್‌ ಎನ್ನುವ ಚಾಲಕ ತನ್ನ ಟೆಂಪೋ ತೆಗೆದುಕೊಂಡು ಹೋಗುತ್ತಿದ್ದ. ಯಾಪಲದಿನ್ನಿ ಠಾಣೆಯ ಪೊಲೀಸರು ವಾಹನದ ತಪಾಸಣೆ ನಡೆಸಿ ಹಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಹಣವಿಲ್ಲ ಎಂದು ಚಾಲಕ ಸುರೇಶ್‌ ತಿಳಿಸಿದ್ದಾನೆ. ಇದರಿಂದ ಪೊಲೀಸರು ಚಾಲಕನ ವಸ್ತ್ರ ಧರಿಸಿಲ್ಲ ನೆಪ ಮಾಡಿಕೊಂಡು ಲಾಠಿಯಿಂದ ಥಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸ್‌ ದೌರ್ಜನ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next