Advertisement

ತುರ್ವಿಹಾಳ್ ಪಟ್ಟಣದಲ್ಲಿ ಆಸ್ತಿ ಕಲಹ ತಂದೆಯಿಂದಲೇ ‌ಮಗನ ಕೊಲೆ

01:07 PM Jul 29, 2021 | Team Udayavani |

ಮಸ್ಕಿ : ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ  ಕಾಲುವೆಗೆ ನೂಕಿ ಹೆತ್ತ ಮಗನನ್ನೇ ಕೊಲೆ  ಮಾಡಿದ ಘಟನೆ ನಡೆದಿದೆ.

Advertisement

ಯಲ್ಲಪ್ಪ (27) ಕೊಲೆಯಾದ  ದುರ್ದೈವಿ. ಪಾಪಿ ತಂದೆ ಹನುಮಂತ ಎನ್ನುವವನಿಂದ‌ ಈ ಕೃತ್ಯ ನಡೆದಿದೆ.

ಇದನ್ನೂ ಓದಿ : ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್‌ 1ಕ್ಕೆ ಟ್ರೇಲರ್‌, ಆ. 20ಕ್ಕೆ ಸಿನಿಮಾ ರಿಲೀಸ್

ಮಗನನ್ನು ನಂಬಿಸಿ ಕಾಲುವೆ ಬಳಿ ಕರೆದೊಯ್ದು ಕಾಲುವೆಗೆ ನೂಕಿದ್ದಾನೆ. ಈಜು ಬಾರದ ಯಲ್ಲಪ್ಪ ಹರಿಯುವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮೂರು ಮದುವೆಯಾಗಿರುವ ತಂದೆ ಹನುಮಂತ ಆಸ್ತಿ ವಿಚಾರವಾಗಿ ಮಗನೊಂದಿಗೆ  ಆಗಾಗ ಜಗಳ ಮಾಡ್ತಿದ್ದ. ಮಗ ಆಸ್ತಿ ಕೇಳುತ್ತಾನೆ ಎಂದು ಮಗನನ್ನ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

Advertisement

ಆರೋಪಿ ಹನಮಂತನನ್ನ ಬಂಧಿಸಿರುವ ಪೋಲೀಸರು ಸಿಂಧನೂರು ತಾಲೂಕಿನ ತುರ್ವಿಹಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್‌ 1ಕ್ಕೆ ಟ್ರೇಲರ್‌, ಆ. 20ಕ್ಕೆ ಸಿನಿಮಾ ರಿಲೀಸ್

Advertisement

Udayavani is now on Telegram. Click here to join our channel and stay updated with the latest news.

Next