Advertisement

ರೈ ಹೋಮ್‌ ಮಿನಿಸ್ಟರ್‌ ಆಗುವುದು ಖಚಿತ; ಕೆಂಪಯ್ಯ ಅಭಿನಂದನೆ 

12:21 PM Sep 01, 2017 | Team Udayavani |

ಬೆಂಗಳೂರು : ಅರಣ್ಯ ಸಚಿವರಾಗಿರುವ ಬಿ.ರಮನಾಥ ರೈ ಅವರು ಭಡ್ತಿ ಪಡೆದು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಇಂದು ಶುಕ್ರವಾರ ಸಂಜೆ ಸಂಪುಟ ವಿಸ್ತರಣೆ ಯಾಗಲಿದ್ದು , ಅದಕ್ಕೂ ಮುನ್ನ ಗೃಹ ಸಚಿವಾಲಯದ ಸಲಹೆಗಾರ ಕೆಂಪಯ್ಯ ಅವರು ರೈ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಡಾಲರ್ಸ್‌ ಕಾಲೋನಿಯಲ್ಲಿರುವ ರೈ ಅವರ ನಿವಾಸಕ್ಕೆ ಆಗಮಿಸಿದ ಕೆಂಪಯ್ಯ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. 

ಕಳೆದ 2 ತಿಂಗಳ ಹಿಂದೆಯೆ ರೈ ಅವರು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಚಿತ ಪಡಿಸಿರಲಿಲ್ಲ. 

ಚುನಾವಣಾ ಲೆಕ್ಕಾಚಾರ ಮುಂದಿಟ್ಟು ಕೊಂಡು ರೈ ಅವರಿಗೆ ಗೃಹ ಖಾತೆ ನೀಡಲಾಗಿದೆ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next