Advertisement

ರಾಹುಲ್‌ ಹುಟ್ಟುಹಬ್ಬ: ಅಡುಗೆ ಎಣ್ಣೆ ವಿತರಣೆ

07:33 PM Jun 20, 2021 | Team Udayavani |

ಮೈಸೂರು: ರಾಜ್ಯ ಮಹಿಳಾ ಕಾಂಗ್ರೆಸ್‌ವತಿಯಿಂದ ಆರ್ಥಿಕವಾಗಿ ಹಿಂದುಳಿದಮಹಿಳೆಯರಿಗೆ ಅಡುಗೆ ಎಣ್ಣೆ ಕೊಡುವಮೂಲಕ ರಾಹುಲ್‌ ಗಾಂಧಿಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.ನಗರದ ಕಾಂಗ್ರೆಸ್‌ ಕಚೇರಿಯಲ್ಲಿಶನಿವಾರ ನಡೆದ ಕಾರ್ಯಕ್ರಮದಲ್ಲಿಮಹಿಳೆಯರಿಗೆ ಅಡುಗೆ ಎಣ್ಣೆ ನೀಡುವಜೊತೆಗೆ ಬಡಮಕ್ಕಳಿಗೆ ಹೆಲ್ತ…ಕಿಟ್‌ ಮತ್ತುದಿನಸಿಕಿಟ್‌ ವಿತರಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಮಾತನಾಡಿ, ನಾಯಕ ರಾಹುಲ್‌ಗಾಂಧಿ ಅವರೊಂದಿಗೆ ನಾನು ಕೂಡ ಲೋಕಸಭೆ ಸದಸ್ಯನಾಗಿ 10 ವರ್ಷ ಕಾರ್ಯನಿರ್ವಹಿಸಿದ್ದೇನೆ. ಬಡವರ ಪರ ಸದಾ ಕಾಳಜಿ ತೋರಿಸುತ್ತಿರುವ ಅವರನ್ನು ಆರ್ಥಿಕವಾಗಿ ಮೇಲಕ್ಕೆತ್ತುವಅಭಿಲಾಶೆ ಇಟ್ಟುಕೊಂಡಿರುವ ನಾಯಕ.ನಾನು ಶಾಸಕನಾಗಿದ್ದ ಸಂದರ್ಭದಲ್ಲಿಮೊದಲ ಬಾರಿಗೆ ಬಿಳಿಗಿರಿರಂಗನ ಬೆಟ್ಟಕ್ಕೆಭೇಟಿ ನೀಡಿ ಅರಣ್ಯವಾಸಿಗಳ ಅಹವಾಲು ಕೇಳಿದ್ದರು.

ಅರಣ್ಯ ಕಾಯಿದೆ ಹಕ್ಕನ್ನುಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನಮಾಡಿದ್ದರು ಎಂದರು.ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ.ಪುಷ್ಪಅಮರನಾಥ್‌ ಮಾತನಾಡಿ, ರಾಹುಲ್‌ಗಾಂಧಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ತೀರ್ಮಾನಿಸಿದ್ದಾರೆ .ಜೊತೆಗೆ ಮಹಿಳೆಯರು, ಮಕ್ಕಳಿಗೆ ನೆರವುನೀಡುವಂತೆಸೂಚಿಸಿದ್ದಾರೆ.ಈಹಿನ್ನೆಲೆಯಲ್ಲಿಬಡ ಮಹಿಳೆಯರಿಗೆ ದಿನಸಿ ಕಿಟ್‌ ಹಾಗೂಮಕ್ಕಳಿಗೆ ಹೆಲ್ತ… ಕಿಟ್‌ ವಿತರಿಸಲಾಗಿದೆಎಂದರು.ಈವೇಳೆಶಾಸಕಎಚ್‌.ಪಿ.ಮಂಜುನಾಥ್‌,ಅನಿಲ್‌ ಚಿಕ್ಕಮಾದು, ವಿಧಾನ ಪರಿಷತ್‌ಸದಸ್ಯ ಧರ್ಮಸೇನಾ, ಜಿಲ್ಲಾ ಗ್ರಾಮಾಂತರಅಧ್ಯಕ್ಷ ವಿಜಯ್‌ಕುಮಾರ್‌, ಮಾಜಿಶಾಸಕರಾದ ವಾಸು, ಎಸ್‌.ಕೆ.ಸೋಮಶೇಖರ್‌, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next