Advertisement

ಗುರುನಾನಕ್‌ ಮಂದಿರಕ್ಕೆ ರಾಹುಲ್‌ ಭೇಟಿ

01:01 PM May 05, 2018 | Team Udayavani |

ಬೀದರ: ನಗರದ ಸಿಖ್‌ ಧರ್ಮಿಯರ ಆರಾಧ್ಯದೇವ ಗುರುನಾನಕ್‌ ಮಂದಿರಕ್ಕೆ (ಗುರುದ್ವಾರ) ಶುಕ್ರವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ನೀಡಿ ದರ್ಶನ ಪಡೆದರು.

Advertisement

ಜಿಲ್ಲೆಯ ವಿವಿಧೆಡೆ ಗುರುವಾರ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ರಾತ್ರಿ ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿದ್ದ ರಾಹುಲ್‌ ಗಾಂಧಿ ಶುಕ್ರವಾರ ಬೆಳಗ್ಗ 10:30ಕ್ಕೆ ಗುರುದ್ವಾರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಗುರುನಾನಕ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರ್‌ ಸಿಂಗ್‌ ಅವರು ರಾಹುಲ್‌ ಅವರಿಗೆ ಹೂಗುತ್ಛ ನೀಡಿ ಸ್ವಾಗತಿಸಿದರು. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸಾಥ್‌ ನೀಡಿದರು.
 
ಗುರುದ್ವಾರಕ್ಕೆ ಆಗಮಿಸಿದ ರಾಹುಲ್‌ ನೇರವಾಗಿ ಪ್ರಬಂಧಕ ಕಮಿಟಿಯ ಕಚೇರಿಗೆ ತೆರಳಿ ಹಸ್ತಾಕ್ಷರ ಮಾಡಿದರು. ಮುಖಂಡರಿಂದ ಗುರುದ್ವಾರದ ಹಿನ್ನೆಲೆಯ ಮಾಹಿತಿ ಪಡೆದರು. ಬಳಿಕ ಚಿನ್ನ ಲೇಪಿತ ನೂತನ ಗುರುದ್ವಾರ ನಿರ್ಮಾಣ ಕಾಮಗಾರಿಯ ವೀಕ್ಷಣೆ ಮಾಡಿದರು.

ತದನಂತರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಸಿಖ್‌ ಧರ್ಮ ಗುರುಗಳು ಮತ್ತು ಅನುಯಾಯಿಗಳ ಸಂದೇಶಗಳುಳ್ಳ ಭಾವಚಿತ್ರಗಳನ್ನು ವೀಕ್ಷಿಸಿ ಮಾಹಿತಿ ಪಡೆದರು ಮತ್ತು ಪ್ರಸಾದ ಸ್ವೀಕರಿಸಿದರು. 

ಈ ವೇಳೆ ರಾಹುಲ್‌ಗೆ ಪೋಷಾಕು ಟೊಪ್ಪಿಗೆ ಹಾಕಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ತದನಂತರ ಗುರುನಾನಕರು ತಮ್ಮ ಪಾದ ಸ್ಪರ್ಷದಿಂದ ನೀರು ಚಿಮ್ಮಿಸಿದ್ದ ಅಮೃತ ಕುಂಡದ ದರ್ಶನ ಮಾಡಿ, ನೀರು ಸೇವಿಸಿದರು. ಸಚಿವ ಈಶ್ವರ ಖಂಡ್ರೆ, ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ರಹೀಮ್‌ ಖಾನ್‌, ಪ್ರಬಂಧಕ ಕಮಿಟಿಯ ಮನಪ್ರೀತಸಿಂಗ್‌ ಬಂಟಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next