Advertisement

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

04:40 PM Sep 30, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಪ್ರಾರಂಭಿಸಿರುವ ರಾಹುಲ್ ಗಾಂಧಿ “ಕೂಡಿ ಬಾಳಿದರೆ ಸ್ವರ್ಗ” ಎಂದು ಟ್ವೀಟ್ ಮಾಡಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

Advertisement

ಎಲ್ಲರನ್ನೂ‌‌ ಒಳಗೊಳ್ಳುವ ಸಮಾಜ ನಿರ್ಮಾಣ‌ ಪ್ರತಿಪಾದಿಸಿದ್ದ ಮಹಾ ಗುರು ಬಸವಣ್ಣ‌ನ ನಾಡಿಗೆ ನಾವು ಪ್ರವೇಶಿಸುತ್ತಿದ್ದೇವೆ. ರಾಜ್ಯದ ಜನತೆಯ ಧ್ವನಿ ಆಲಿಸುವುದಕ್ಕೆ ನಾವು ಬಂದಿದ್ದೇವೆ ಎಂಬ ಬರಹದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಫೋಟೋ ಹಾಕಿ “ಕೂಡಿ ಬಾಳಿದರೆ ಸ್ವರ್ಗ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ರಾಹುಲ್ ಹೆಜ್ಜೆ ಜೊತೆಗೆ ಇತಿಹಾಸ ನಿರ್ಮಾಣವಾಗುತ್ತಿದೆ: ಡಿಕೆ ಶಿವಕುಮಾರ್

ಉಭಯ ನಾಯಕರು ಒಳಜಗಳ ಮರೆತು ಒಟ್ಟಾಗಿ ಸಾಗಬೇಕೆಂದು ಈ ಮೂಲಕ ರಾಹುಲ್ ಗಾಂಧಿ ಆಶಯ ವ್ಯಕ್ತಪಡಿಸಿದ್ದಾರೆಂಬ ವ್ಯಾಖ್ಯಾನ ಈಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ.

Advertisement

ಭಾರತ್ ಜೋಡೋ ವೇದಿಕೆಯನ್ನು ರಾಹುಲ್ ಗಾಂಧಿ ಅವರು ಮತ್ತೆ ನಾಯಕರ ಒಗ್ಗೂಡುವಿಕೆಗೆ ಬಳಸಿಕೊಂದಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಡೋಲು ಬಾರಿಸಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೈಯನ್ನು ಒಟ್ಟಾಗಿ ಹಿಡಿದುಕೊಂಡು ರಾಹುಲ್ ಡೋಲು ಬಾರಿಸಿ ಸಂದೇಶ ನೀಡಿದರು.

ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೊದಲು ಪ್ರತ್ಯೇಕವಾಗಿ ಡೋಲು ಬಾರಿಸಿದರು. ಬಳಿಕ ರಾಹುಲ್ ತಾವೇ ಸಿದ್ದು, ಡಿಕೆಶಿ ಕೈ ಹಿಡಿದುಕೊಂಡು ಡೋಲು ಬಾರಿಸಿದರು.

ಈ ಹಿಂದೆ ಸಿದ್ದರಾಮೋತ್ಸವದಲ್ಲೂ ಸಿದ್ದರಾಮಯ್ಯರನ್ನು ಅಪ್ಪಿಕೊಳ್ಳುವಂತೆ ಡಿಕೆ ಶಿವಕುಮಾರ್ ಗೆ ರಾಹುಲ್ ಗಾಂಧಿ ಕೈಸನ್ನೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next