Advertisement

ಮೋದಿ ಬದಲಿಗೆ ರಾಹುಲ್‌ ಸಿಕ್ಕರು!

11:42 AM Jun 18, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ ಯನ್ನು ಭೇಟಿ ಮಾಡುವುದಕ್ಕೆಂದು ಒಡಿಶಾದಿಂದ ನವ ದಿಲ್ಲಿಗೆ 1350 ಕಿ.ಮೀ ನಡೆದು ಆಗಮಿಸಿದ್ದ ವ್ಯಕ್ತಿಗೆ ಮೋದಿ ಸಿಗಲಿಲ್ಲ. ಬದಲಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯಿಂದ ಮತ್ತೂಂದು ಭರವಸೆ ಸಿಕ್ಕಿದೆ!

Advertisement

ನಾಲ್ಕು ವರ್ಷಗಳ ಹಿಂದೆ ರೂರ್ಕೆಲಾಗೆ ಭೇಟಿ ನೀಡಿದ್ದ ಮೋದಿ, ಅಲ್ಲಿನ ಆಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆ ಗೇರಿಸುವ ಭರವಸೆ ನೀಡಿದ್ದರು. ಆದರೆ ಸೌಲಭ್ಯಗಳ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿದ್ದರೂ ಭರವಸೆ ಈಡೇರಿಲ್ಲ. ಹೀಗಾಗಿ ಅವರಿಗೆ ತಮ್ಮ ಭರವಸೆಯನ್ನು ನೆನಪಿಸುವ ಉದ್ದೇಶದಿಂದ 30 ವರ್ಷದ ಮುಕ್ತಿಕಾಂತ ಬಿಸ್ವಾಲ್‌ ಕಾಲ್ನಡಿಗೆಯಲ್ಲಿ ಆಗಮಿಸಿ, ಶನಿವಾರ ದಿಲ್ಲಿ ತಲುಪಿದ್ದಾರೆ.

ಮೋದಿ ಭೇಟಿ ಮಾಡಿ ಆಸ್ಪತ್ರೆ ಮೇಲ್ದರ್ಜೆ ಗೇರಿಸುವುದು ಹಾಗೂ ಬ್ರಹ್ಮನಿ ಸೇತುವೆ ನಿರ್ಮಾಣ ಪೂರ್ಣಗೊಳಿಸುವ ಭರವಸೆ ಯನ್ನು ಪೂರೈಸುವಂತೆ ವಿನಂತಿಸಿಕೊಳ್ಳಲಿದ್ದೇನೆ ಎಂದು ಮುಕ್ತಿಕಾಂತ ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಕೆಲಸ ಆಗದಿದ್ದರೂ, ಈ ವರ್ಷ ಈ ಯೋಜನೆ ಪೂರ್ಣಗೊಳ್ಳುವ ಭರವಸೆಯನ್ನು ನಾನು ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಮೋದಿ ಭೇಟಿಗೆ ಇನ್ನೂ ಅವರಿಗೆ ಅವಕಾಶ ಸಿಗಲಿಲ್ಲ. ಈ ಬಗ್ಗೆ ಟ್ವೀಟ್‌ ಮಾಡಿದ ರಾಹುಲ್‌ ಗಾಂಧಿ, ಪ್ರಧಾನಿ ನೀಡಿದ ಭರವಸೆಯನ್ನು ಕಾಂಗ್ರೆಸ್‌ ಪೂರೈಸಲಿದೆ ಎಂದು ಮತ್ತೂಂದು ಭರವಸೆ ನೀಡಿದ್ದಾರೆ. ಪ್ರಧಾನಿ ತನ್ನ ಭರವಸೆಯನ್ನು ಪೂರೈಸಿಲ್ಲ ಎಂಬ ಕಾರಣಕ್ಕೆ ಮುಕ್ತಿಕಾಂತ್‌ 1350 ಕಿ.ಮೀ ನಡೆದು ಬಂದಿದ್ದಾರೆ. ಜನರು ಅಲ್ಲಿ ಸಾವನ್ನಪ್ಪುತ್ತಿದ್ದಾರೆ. ಪ್ರಧಾನಿಯ ಭರವಸೆಯನ್ನು ಕಾಂಗ್ರೆಸ್‌ ಪೂರೈಸುತ್ತದೆ ಎಂದು ಬಿಸ್ವಾಲ್‌ಗೆ ನಾನು ಆಶ್ವಾಸನೆ ನೀಡುತ್ತೇನೆ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next