Advertisement

2019ರಲ್ಲಿ ಗೆದ್ದುಬಂದರೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ: ರಾಹುಲ್‌

05:01 PM Mar 06, 2018 | Team Udayavani |

ಹೊಸದಿಲ್ಲಿ : ಇಲ್ಲಿನ ಜಂತರ್‌ ಮಂತರ್‌ನಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ತೆಲುಗು ದೇಶಂ ಪಕ್ಷದ ಸಂಸದರ ಗುಂಪೊಂದನ್ನು ಭೇಟಿಯಾಗಿ ತನ್ನ ಬೆಂಬಲ ಪ್ರಕಟಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಬಂದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನು ನೀಡಿದರು.

Advertisement

2014ರಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡುವಾಗ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಭರವಸೆಯನ್ನು ನೀಡಲಾಗಿತ್ತು. ಅದನ್ನು ಸಂಸತ್ತಿನಲ್ಲೂ ಪ್ರಕಟಿಸಲಾಗಿತ್ತು ಮತ್ತು ಬಿಜೆಪಿ ಸಹಿತ ಎಲ್ಲ ರಾಜಕೀಯ ಪಕ್ಷಗಳು ಅದನ್ನು ಅನುಮೋದಿಸಿದ್ದವು. 

“ಈಗ ಈ ಭರವಸೆಯನ್ನು ಈಡೇರಿಸುವ ಕಾಲ ಒದಗಿ ಬಂದಿದೆ’ ಎಂದು ರಾಹುಲ್‌ ಪ್ರತಿಭಟನೆ ನಿರತ ಟಿಡಿಪಿ ಸಂಸದರಿಗೆ ಹೇಳಿದರು. 

“ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡುವ ನಮ್ಮ ನಿಲುವು ಸ್ಪಷ್ಟ ಮತ್ತು ಅಚಲವಾಗಿದೆ. ಇಂದಿಗೂ ನಾವು ಆ ನಿಲುವಿಗೆ ಬದ್ಧರಾಗಿದ್ದೇವೆ; 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬಂದರೆ ನಾವು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನವನ್ನು ಕೊಟ್ಟೇ ತಿರುತ್ತೇವೆ’ ಎಂದು ರಾಹುಲ್‌ ಗಾಂಧಿ ಟಿಡಿಪಿ ಸಂಸದರಿಗೆ ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next