Advertisement

ರಾಹುಲ್‌ ಗಾಂಧಿಗೆ ಸೂಕ್ತ ಭದ್ರತೆ ಇರಲಿಲ್ಲ: ಟಿಎನ್‌ ಕಾಂಗ್ರೆಸ್‌ ಆರೋಪ

06:14 PM Aug 11, 2018 | Team Udayavani |

ಚೆನ್ನೈ : ”ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ದಿವಂಗತ ಡಿಎಂಕೆ ನಾಯಕ ಎಂ ಕರುಣಾನಿಧಿ ಅವರಿಗೆ ಅಂತಿಮ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದಾಗ ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗಿಲ್ಲ. ಈ ಭದ್ರತಾ ಲೋಪ ಎಸಗಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ತತ್‌ಕ್ಷಣವೇ ಕ್ರಮ ತೆಗೆದುಕೊಳ್ಳಬೇಕು” ಎಂದು ತಮಿಳು ನಾಡು ಕಾಂಗ್ರೆಸ್‌ ಆಗ್ರಹಿಸಿದೆ.

Advertisement

ರಾಹುಲ್‌ ಗಾಂಧಿ ಕಳೆದ ಆಗಸ್ಟ್‌ 8ರಂದು ಇಲ್ಲಿನ ರಾಜಾಜಿ ಹಾಲ್‌ಗೆ ಬಂದು ಇಲ್ಲಿ ಇರಿಸಲಾಗಿದ್ದ ಅಗಲಿದ ಕರುಣಾನಿಧಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದರು. 

ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿ ತೆರಳಿದ ಬಳಿಕ ವಿಐಪಿ ಗಳಿಗಾಗಿ ಮೀಸಲಿರಿಸಿದ್ದ ವಿಶೇಷ ಪ್ರವೇಶ ದ್ವಾರವನ್ನು ಪೊಲೀಸರಿಗೆ ಸಾರ್ವಜನಿಕರಿಗೆ ತೆರವು ಗೊಳಿಸಿದ್ದರು.

ಇದರಿಂದಾಗಿ ಇಲ್ಲಿ ನೂಕು ನುಗ್ಗಲು, ತಿಕ್ಕಾಟ ಉಂಟಾಗಿತ್ತು. ಇದರಿಂದ ರಾಹುಲ್‌ ಗಾಂಧಿ ಅವರಿಗೂ ಸಾಕಷ್ಟು ಕಿರಿಕಿರಿ ಉಂಟಾಗಿತ್ತು ಎಂದು ತಮಿಳು ನಾಡು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸು. ತಿರುವಕ್ಕರಸರ್‌ ಹೇಳಿಕೆಯೊಂದರಲ್ಲಿ ಆಪಾದಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next