Advertisement

ಕರಾವಳಿಯಲ್ಲಿ ರಾಹುಲ್‌:ಮೀನುಗಾರರ ಮನೆಯಲ್ಲಿ ಕೈ ನಾಯಕರ ದಂಡು

03:12 PM Mar 20, 2018 | Team Udayavani |

ಮಂಗಳೂರು /ಉಡುಪಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಂಗಳವಾರ ಕರಾವಳಿಯ ಪ್ರವಾಸದಲ್ಲಿದ್ದು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

Advertisement

ಪಡುಬಿದ್ರಿಯ ತೆಂಕ ಎರ್ಮಾಳ್‌ನಲ್ಲಿ ಮೀನುಗಾರರೊಬ್ಬರ ಮನೆಯಲ್ಲಿ ತಿಂಡಿ ಸೇವಿಸಿ ಮಾತುಕತೆ ನಡೆಸಿದರು. ಮೀನಿನ ಸಾಂಬಾರಿನೊಂದಿಗೆ ನೀರು ದೋಸೆ ಸವಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಪ್ರಮೋದ್‌ ಮಧ್ವರಾಜ್‌, ಶಾಸಕ ವಿನಯ್‌ ಕುಮಾರ್‌ ಸೊರಕೆ, ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌,ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮೊದಲಾದ ನಾಯಕರು ಉಪಸ್ಥಿತರಿದ್ದರು. 

ತೆಂಕ ಎರ್ಮಾಳ್‌ನಿಂದ ಪಡುಬಿದ್ರಿಯ ವರಗೆ  ರೋಡ್‌ ಶೋ ನಡೆಸಿದರು. ಪಡುಬಿದ್ರಿಯಲ್ಲಿ ನಡೆದ ಕಾಂಗ್ರೆಸ್‌ ಬೃಹತ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

Advertisement

ಮಂಗಳೂರಿನ ಹೆಜಮಾಡಿಯಲ್ಲಿರುವ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next