Advertisement

ರಾಹುಲ್‌ ಗಾಂಧಿ ಸವಕಲು ನಾಣ್ಯ: ಬಿಎಸ್‌ವೈ ಲೇವಡಿ

03:50 AM Jul 08, 2017 | Team Udayavani |

ಬನಹಟ್ಟಿ (ಬಾಗಲಕೋಟೆ): ಕಾಂಗ್ರೆಸ್‌ ನಾಯಕತ್ವ ವಹಿಸಿಕೊಂಡಿರುವ ರಾಹುಲ್‌ ಗಾಂಧಿ ಸವಕಲು ನಾಣ್ಯವಾಗಿದ್ದಾರೆ. ಹೀಗಾಗಿ ಅವರದೇ ಪಕ್ಷದ ಇತರೇ ಮುಖಂಡರು ಪರ್ಯಾಯ ನಾಯಕರ ಹುಡುಕಾಟದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಲೇವಡಿ ಮಾಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ನಾಯಕತ್ವವನ್ನು ಅವರ ಮಿತ್ರಪಕ್ಷ ಹಾಗೂ ಕಾಂಗ್ರೆಸ್‌ನ ಕೆಲವರು ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ರಾಹುಲ್‌ ಬದಲಿಗೆ ಬೇರೆ ನಾಯಕತ್ವದ ಆಯ್ಕೆಯ ಹುಡುಕಾಟ ಆರಂಭಿಸಿದ್ದಾರೆ ಎಂದರು.

ತನಿಖೆ ಮಾಡಲಿ:  ರಾಜ್ಯದ ನೀರಾವರಿ ಇಲಾಖೆಯಲ್ಲಿ ಹಿಂದೆ ಎಂದೂ ಕಂಡರಿಯದ ಹಗರಣ, ಭ್ರಷ್ಟಾಚಾರ ನಡೆದಿದೆ.ಅದರ ಅಂಕಿ-ಸಂಖ್ಯೆ ಪುರಾವೆ ನನ್ನ ಬಳಿ ಇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರು ಹಗಲು ದರೋಡೆ ನಡೆಸಿದ್ದಾರೆ ಎಂದು ಆರೋಪಿಸಿದ ಯಡಿಯೂರಪ್ಪ, ಜಿಂದಾಲ್‌ ಕಂಪನಿಗೆ ಆಲಮಟ್ಟಿ ಜಲಾಶಯದ ನೀರು ಹಂಚಿಕೆ ಮಾಡಿದ್ದರ ಕುರಿತು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತನಿಖೆ ಮಾಡಲಿ. ಈಗ ಅವರದೇ ಸರ್ಕಾರ ಇದ್ದು, ನಾನು ತನಿಖೆ ಎದುರಿಸಲು ಸಿದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next