Advertisement

ರೆಹಮಾನ್‌ ಖಾನ್‌ ಸಾಧನೆ ಅಮೂಲ್ಯ

12:57 AM Jun 30, 2019 | Lakshmi GovindaRaj |

ಬೆಂಗಳೂರು: ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್‌ ಖಾನ್‌ ಅವರು ಜನ ನೆನಪಿಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೆ.ರೆಹಮಾನ್‌ ಖಾನ್‌ ಅವರ “ಮೈ ಮೆಮೋರಿಸ್‌’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮನುಷ್ಯನ ಹುಟ್ಟು ಆಕಸ್ಮಿಕ, ಜನನ ಉಚಿತ, ಸಾವು ಖಚಿತ. ಆದರೆ ನಮ್ಮ ಸಾಧನೆ ನೂರು ವರ್ಷ ನೆನಪಿರುತ್ತದೆ. ಸರಳ ಸಜ್ಜನಿಕೆಯ, ಸ್ವಾಭಿಮಾನಿ ರೆಹಮಾನ್‌ ಖಾನ್‌ ಅವರು ಜನ ಸದಾ ನೆನಪಿಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮುಸ್ಲಿಂ ಸಮುದಾಯದಲ್ಲಿ ಚಾರ್ಟೆಡ್‌ ಅಕೌಂಟೆಂಟ್‌ (ಸಿ.ಎ) ಆಗಿ ಕೆಲಸ ಮಾಡಿದ ಮೊದಲಿಗರಾದ ರೆಹಮಾನ್‌ ಖಾನ್‌ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ. ರೆಹಮಾನ್‌ ಖಾನ್‌ ಅವರು ಮುಸ್ಲಿಂ ಸಮುದಾಯ ಮಾತ್ರವಲ್ಲದೆ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಸಮಾಜಕ್ಕಾಗಿಯೇ ತಮ್ಮ ಸೇವೆ ಮುಡುಪಾಗಿಟ್ಟಿದ್ದಾರೆ ಎಂದು ಹೇಳಿದರು.

ಇದೇ ವೇಳೆ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ನೀಡುವ ಸೇವಾ ಸನ್ಮಾನ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಸಾಧಕರಿಗೆ ಪ್ರದಾನ ಮಾಡಿದರು. ಸಚಿವರಾದ ಯು.ಟಿ.ಖಾದರ್‌, ಬಿ.ಜಡ್‌. ಜಮೀರ್‌ ಅಹಮ್ಮದ್‌ ಖಾನ್‌, ಶಾಸಕರಾದ ತನ್ವೀರ್‌ ಸೇಠ್, ಎನ್‌.ಎ.ಹ್ಯಾರಿಸ್‌, ಆರ್‌.ರೋಷನ್‌ ಬೇಗ್‌, ಎಚ್‌.ಕೆ.ಪಾಟೀಲ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next