Advertisement

ರವಿ ಶ್ರೀವತ್ಸ ನಿರ್ದೇಶನದ ಚಿತ್ರದಲ್ಲಿ ರಾಗಿಣಿ!

03:40 PM Jul 25, 2017 | Sharanya Alva |

ರಾಗಿಣಿ ಅಭಿನಯದ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಕಾಯುತ್ತಿದೆ. “ಮುಸ್ಸಂಜೆ’ ಮಹೇಶ್‌ ನಿರ್ದೇಶನದ “ನಾನೇ ನೆಕ್ಸ್ಟ್ ಸಿಎಂ’, ಪ್ರದೀಪ್‌ ರಾಜ್‌ ನಿರ್ದೇಶನದ “ಕಿಚ್ಚು’, ಜೀತು ನಿರ್ದೇಶನದ “ಹುಲಿದೇವರ ಕಾಡು’ ಸೇರಿದಂತೆ ಕೆಲವು ಚಿತ್ರಗಳು ಮುಗಿದಿವೆ. ಆದರೆ, ಅದ್ಯಾಕೋ ಆ ಚಿತ್ರಗಳ ಬಿಡುಗಡೆಗೆ ಮುಹೂರ್ತ ಕೂಡಿಬರುತ್ತಿಲ್ಲ.

Advertisement

ಹೀಗಿರುವಾಗಲೇ, ರಾಗಿಣಿ ಹೊಸದೊಂದು ಚಿತ್ರವನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ರವಿ ಶ್ರೀವತ್ಸ. ರವಿ ಶ್ರೀವತ್ಸ ಚಿತ್ರಗಳೆಂದರೆ ಗೊತ್ತಲ್ಲ, ಪಕ್ಕಾ ಕಮರ್ಷಿಯಲ್‌ ಅಲ್ಲದೆ ಔಟ್‌ ಆ್ಯಂಡ್‌ ಔಟ್‌ ಮಾಸ್‌ ಚಿತ್ರಗಳಾಗಿರುತ್ತವೆ. ಈಗ ಅಂಥದ್ದೇ ಇನ್ನೊಂದು ಚಿತ್ರವನ್ನು ರವಿ, ರಾಗಿಣಿ ಅಭಿನಯದಲ್ಲಿ ಶುರು ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಈ ಚಿತ್ರವನ್ನು ಹಿರಿಯ ನಿರ್ಮಾಪಕ ಎಂ.ಎನ್‌. ಕುಮಾರ್‌ ಅವರ ಮಗ ಯೋಗೀಶ್‌ ಕುಮಾರ್‌ ನಿರ್ಮಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಕಥೆ, ಚಿತ್ರಕಥೇ ಮತ್ತು ಸಂಭಾಷಣೆಯನ್ನು ರವಿ ಶ್ರೀವತ್ಸ ಅವರೇ ಬರೆದು ನಿರ್ದೇಶಿಸುತ್ತಿದ್ದಾರೆ.

ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆದಿದ್ದು, ರವಿ ಮತ್ತು ಯೋಗೀಶ್‌ ಕುಮಾರ್‌ ಅವರ ಇನ್ನೊಂದು ಚಿತ್ರ “ಟೈಗರ್‌ ಗಲ್ಲಿ’ ಬಿಡುಗಡೆಯಾದ ನಂತರ, ಇದು ಸೆಟ್ಟೇರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next