Advertisement
ಜತೆಗೆ, “ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ರಫೇಲ್ ಒಪ್ಪಂದ ಕುರಿತ ಲೇಖನಗಳು “ರಕ್ಷಣಾ ಸಚಿವಾಲಯದಿಂದ ಕದ್ದ ಕಡತಗಳ ಮಾಹಿತಿ ಆಧಾರಿತ’ ಎಂದು ಆರೋಪಿಸಿದೆ. ಇದರಿಂದ, ಇಡೀ ಪ್ರಕರಣದ ವಿಚಾರಣೆ ಈಗ ಹೊಸ ಹಾದಿಗೆ ಹೊರಳಿದಂತಾಗಿದೆ. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾ. 14ಕ್ಕೆ ಮುಂದೂಡಿದೆ. ತೀರ್ಪಿನ ಪುನರ್ ಪರಿಶೀಲನೆಗೆ ಸುಪ್ರೀಂ ಕೋರ್ಟ್ಗೆ ಕೇಂದ್ರದ ಮಾಜಿ ಸಚಿವರಾದ ಯಶ್ವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಮನವಿ ಸಲ್ಲಿಸಿದ್ದರು.
Related Articles
Advertisement
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠದಲ್ಲಿದ್ದ ನ್ಯಾ| ಜೋಸೆಫ್ ಕುರಿಯನ್, “ಬೋಫೋರ್ಸ್ ವಿಚಾರದಲ್ಲೂ ನೀವು ಇದೇ ಮಾತನ್ನು ಹೇಳುವಿರಾ?’ ಎಂದು ಪ್ರಶ್ನಿಸಿದರು. ಆದರೂ ಪಟ್ಟು ಬಿಡದ ವೇಣುಗೋಪಾಲ್, ರಫೇಲ್ ಒಪ್ಪಂದದ ತೀರ್ಪಿನ ಬಗ್ಗೆ ಮರು ವಿಚಾರಣೆ ಸಲ್ಲದು ಎಂದರು.
ಸಿಂಗ್ ಅರ್ಜಿ ನಿರಾಕರಣೆ: ಕೇಂದ್ರ ಸರಕಾರಕ್ಕೆ ಕ್ಲೀನ್ ಚಿಟ್ ಕೊಟ್ಟಿದ್ದ ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದವರಲ್ಲಿ ಒಬ್ಬರಾಗಿದ್ದ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಡಿಸೆಂಬರ್ನಲ್ಲಿ ಸುಪ್ರೀಂ ತೀರ್ಪು ಹೊರಬಿದ್ದಾಗ, ನ್ಯಾಯಾಲಯದ ವಿರುದ್ಧ ಸಿಂಗ್ ಅವಹೇಳನಕಾರಿ ಮಾತುಗಳನ್ನಾಡಿದ್ದರಿಂದ ನ್ಯಾಯಪೀಠ ಸಿಂಗ್ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ಖಂಡಾಖಂಡಿತವಾಗಿ ಹೇಳಿದೆ.
ಆರೋಪಕ್ಕೂ ನಮಗೂ ಸಂಬಂಧವಿಲ್ಲ: ದ ಹಿಂದೂರಕ್ಷಣಾ ಸಚಿವಾಲಯದಿಂದ ರಫೇಲ್ ಒಪ್ಪಂದದ ಮಾಹಿತಿ ಕಳುವಾಗಿರುವ ಆರೋಪಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು “ದ ಹಿಂದೂ’ ಪತ್ರಿಕೆಯ ಪ್ರಕಾಶನ ಸಂಸ್ಥೆಯ ಮುಖ್ಯಸ್ಥ ಎನ್. ರಾಮ್ ಹೇಳಿದ್ದಾರೆ. ಕೇಂದ್ರದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, “ರಫೇಲ್ ಒಪ್ಪಂದದ ಅಂಶಗಳನ್ನು ಸಾರ್ವಜನಿಕ ಹಿತಾಸಕ್ತಿಯಡಿ ಪ್ರಕಟಿಸಲಾಗಿದೆ. ನಮಗೆ ಮಾಹಿತಿ ನೀಡಿದವರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಬಹಿರಂಗೊಳಿಸಲಾಗುವುದಿಲ್ಲ’ ಎಂದಿದ್ದಾರೆ. ಕಡತದ ಮಾಹಿತಿ ಕಳವು ಪ್ರಕರಣದಲ್ಲಿ ಎಫ್ಐಆರ್ ದಾಖಲಾದರೆ, ಅರ್ಜಿದಾರರು, ದಿ ಹಿಂದೂ ಪತ್ರಿಕೆ ಮತ್ತು ವರದಿಗಾರರನ್ನು ಆರೋಪಿಗಳನ್ನಾಗಿ ಹೆಸರಿಸಲಾಗುತ್ತದೆ
ಎ ಜಿ ವೇಣುಗೋಪಾಲ್ ನೀವು ಎಫ್ಐಆರ್ ದಾಖಲಿಸಿಕೊಳ್ಳಿ. ಆದರೆ, ಈಗ ಬಹಿರಂಗಗೊಂಡಿರುವಂಥ ಕಡತಗಳ ಮಾಹಿತಿ ಯನ್ನು ನಾವು ಪರಿಗಣಿಸಲೇಬಾರದು ಎಂದು ಹೇಳುವುದು ಸರಿಯಾದ ವಾದವಲ್ಲ
ಕೋರ್ಟ್ ರಫೇಲ್ ಒಪ್ಪಂದದ ಕಡತಗಳ ಮಾಹಿತಿ ಕಳುವಾಗಿರುವ ಬಗ್ಗೆ ಕೇಂದ್ರ ಹೇಳಿರುವುದರ ಹಿಂದೆ ಆ ಹಗರಣದ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಉದ್ದೇಶವಿದೆ. ಪ್ರಧಾನಿ ಮೋದಿ ವಿರುದ್ಧ ತನಿಖೆಗೆ ಆದೇಶಿಸಲು ಇದಕ್ಕಿಂತ ಉತ್ತಮ ಸಾಕ್ಷಿ ಮತ್ತೂಂದಿಲ್ಲ.
ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ