Advertisement

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

01:27 AM Apr 18, 2024 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರಕಾ ರವು ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹ ರಾವ್‌ ಮತ್ತು ಅಂದಿನ ಹಣಕಾಸು ಸಚಿವರಾಗಿದ್ದ ಡಾ| ಮನ ಮೋಹನ್‌ ಸಿಂಗ್‌ ಅವರನ್ನು ಹಾಡಿ ಹೊಗಳಿದೆ. 1991 ರಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರು ವುದರ ಮೂಲಕ ಲೈಸನ್ಸ್‌ ರಾಜ್‌ ವ್ಯವಸ್ಥೆಗೆ ಇತಿಶ್ರೀ ಹಾಡಲಾಯಿತು ಎಂದು ಕೇಂದ್ರ ಸರಕಾರವು ಹೇಳಿದೆ. ಸಿಜೆಐ ಡಿ.ವೈ. ಚಂದ್ರಚೂಡ್‌ ಸೇರಿ 9 ನ್ಯಾಯಮೂ ರ್ತಿ ಗಳಿರುವ ಪೀಠಕ್ಕೆ ಮಾಹಿತಿ ನೀಡಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಕಂಪೆನಿ ಕಾನೂನು, ಎಂಆರ್‌ಟಿಪಿ ಕಾಯ್ದೆ ಸೇರಿದಂತೆ ಅನೇಕ ಕಾನೂನುಗಳನ್ನು ರಾವ್‌ ಮತ್ತು ಸಿಂಗ್‌ ನೇತೃತ್ವದ ಸರಕಾರದ ಅವಧಿಯಲ್ಲಿ ಸರಳಗೊಳಿಸಿದರು. 1991ರ ಬಳಿಕ ಅಧಿಕಾರಕ್ಕೆ ಬಂದ ಐಆರ್‌ಡಿಎ ಕಾಯ್ದೆ ತಿದ್ದುಪಡಿಗೆ ಮುಂದಾಗಲಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next