Advertisement

ಸ್ವಾಭಿಮಾನದ ಬದುಕು ರೂಪಿಸಿಕೊಟ್ಟ ರಾಚಯ್ಯ

09:42 PM Aug 26, 2019 | Lakshmi GovindaRaj |

ಚಾಮರಾಜನಗರ: ಬುದ್ಧನ ಹಾದಿ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆದರ್ಶ ಮತ್ತು ಮೌಲ್ಯಗಳನ್ನಿಟ್ಟುಕೊಂಡು ರಾಜಕಾರಣ ಮಾಡಿದ ಬಿ. ರಾಚಯ್ಯನವರು ಈ ಭಾಗದ ಜನರಿಗೆ ಸ್ವಾಭಿಮಾನದ ಬದುಕು ರೂಪಿಸಿಕೊಟ್ಟು ಧೀಮಂತ ನಾಯಕರು ಎಂದು ಹಿರಿಯ ರಂಗಕರ್ಮಿ ಜನಾರ್ದನ್‌ (ಜನ್ನಿ) ಅಭಿಪ್ರಾಯಪಟ್ಟರು. ತಾಲೂಕಿನ ಕುಂಭೇಶ್ವರ ಕಾಲೋನಿ ಗ್ರಾಮಸ್ಥರು ಏರ್ಪಡಿಸಿದ್ದ ಮಾಜಿ ರಾಜ್ಯಪಾಲ ದಿ. ಬಿ. ರಾಚಯ್ಯನವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ತುಳಿತಕ್ಕೊಳಗಾದವರಿಗೆ ಮೇಲೆತ್ತಿದ್ದರು: ಪ್ರಪಂಚಕ್ಕೆ ಅಹಿಂಸೆಯನ್ನು ಸಾರಿದ ಬುದ್ಧ, ದೇಶಕ್ಕೆ ಪವಿತ್ರವಾದ ಸಂವಿಧಾನಕೊಟ್ಟ ಅಂಬೇಡ್ಕರ್‌ ಅವರ ಹಾದಿಯಲ್ಲಿ ಸಾಗಿದ ಬಿ. ರಾಚಯ್ಯ ಅವರು ರಾಜಕೀಯ ಅಧಿಕಾರವನ್ನು ಪಡೆದುಕೊಂಡು, ತುಳಿತಕ್ಕೊಳಗಾದ ಸಮುದಾಯಗಳಿಗೆ ಸಲವತ್ತುಗಳನ್ನು ಕಲ್ಪಿಸಿದರು. ದೂರದೃಷ್ಟಿತ್ವವನ್ನು ಹೊಂದಿ ಚಾಮರಾಜನಗರ ತಾಲೂಕಿನ ಕಾಡಂಚಿನಲ್ಲಿ 13 ಕಾಲೋನಿಗಳನ್ನು ನಿರ್ಮಾಣ ಮಾಡಿದರು. ಅಲ್ಲದೇ ರಾಜ್ಯದ ಉದ್ದಗಲಕ್ಕೂ ಅವರ ಸೇವೆ ಅವಿಸ್ಮರಣೀಯ ಎಂದರು.

ಆದರ್ಶಪ್ರಾಯರಾಗಿ ಜೀವನ ನಡೆಸಿ: ಅಂಬೇಡ್ಕರ್‌ ಅವರು ಎಲ್ಲರಿಗೂ ಬದುಕಿಗೆ ಬೇಕಾದ ಶಿಕ್ಷಣವನ್ನು ನೀಡಿ ಎಂದು ಹೇಳಿದ್ದರು. ಆದರೆ, ಇದಕ್ಕೆ ವಿರುದ್ಧವಾದ ಶಿಕ್ಷಣ ಪದ್ದತಿ ಜಾರಿಯಲ್ಲಿದೆ. ಇಂದಿನ ಶಿಕ್ಷಣ ಬದುಕು ರೂಪಿಸುವ ಬದಲು ನಿರುದ್ಯೋಗ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ. 70ರ ದಶಕದಲ್ಲಿಯೇ ಬಿ. ರಾಚಯ್ಯ ಅವರು ಕಾಲೋನಿಗಳನ್ನು ನಿರ್ಮಾಣ ಮಾಡಿ, 4 ಎಕರೆ ಜಮೀನುಗಳನ್ನು ನೀಡಿ, ಬದುಕು ಕಟ್ಟಿಕೊಟ್ಟಿದ್ದರು. ಅವರು ನೀಡಿದ್ದ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಮೂಲಕ ಅವರಂತೆ ಆದರ್ಶಪ್ರಾಯರಾಗಿ ಜೀವನ ನಡೆಸಲು ಮುಂದಾಗಬೇಕು ಎಂದರು.

ಅಭಿವೃದ್ಧಿ ಹರಿಕಾರ ರಾಚಯ್ಯ: ಶಾಸಕ ಸಿ.ಪುಟ್ಟರಂಗಶೆಟ್ಟಿ ರಾಚಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ರಾಚಯ್ಯನವರು ಈ ಭಾಗದ ಸಜ್ಜನ ರಾಜಕಾರಣಿಯಾಗಿದ್ದರು. ಅಭಿವೃ ದ್ಧಿ ಪರವಾದ ರಾಜಕಾರಣವನ್ನು ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಂಡವರು. ದ್ವೇಷದ ಕಾರಣಕ್ಕೆ ಎಂದು ಸಹ ಅಸ್ಪದ ನೀಡಲಿಲ್ಲ. ಜಾಣ್ಮೆಯಿಂದ ಅಭಿವೃ ದ್ಧಿಪರವಾದ ಚಿಂತನೆಗಳನ್ನು ಮಾಡಿದ್ದರು. ಯಾವುದೇ ಸಮಾಜದ ವಿರೋಧವನ್ನು ಕಟ್ಟಿಕೊಳ್ಳದೆ, ಎಲ್ಲರೊಂದಿಗೆ ಪ್ರೀತಿ ವಿಶ್ವಾಸವನ್ನು ಹೊಂದಿ ತಮ್ಮ ಕಾರ್ಯದಲ್ಲಿ ನಿರತರಾಗಿದ್ದರು ಎಂದು ತಿಳಿಸಿದರು.

ಶಾಶ್ವತ ನೀರಾವರಿ ಸೌಲಭ್ಯ: ಚಿಕ್ಕಹೊಳೆ, ಸುವರ್ಣವತಿ ಜಲಾಶಯಗಳನ್ನು ನಿರ್ಮಾಣ ಮಾಡಿ, ಈ ಭಾಗದ ಜನರಿಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಕಲ್ಪಿಸಿಕೊಟ್ಟವರು. ಜನರು ಪ್ರತಿ ಮನೆಯಲ್ಲಿಯು ಸಹ ಅವರ ಪೋಟೋ ಇಟ್ಟುಕೊಂಡು ಪೂಜೆ ಮಾಡುವ ಮೂಲಕ ಅವರನ್ನು ದೇವರ ಸಮಾನವಾದ ರೀತಿಯಲ್ಲಿ ಕಾಣುತ್ತಿದ್ದಾರೆ. ಇಂಥ ಧೀಮಂತ ನಾಯಕರನ್ನು ನಮ್ಮ ಜಿಲ್ಲೆ ಹೊಂದಿದೆ. ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗುತ್ತಿದೆ. ಬಿ. ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿಯಾಗಿದೆ. ಇನ್ನು ಪುತ್ಥಳಿಯನ್ನು ನಿರ್ಮಾಣ ಮಾಡಿ, ಪ್ರಮುಖವಾದ ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡಬೇಕಾಗಿದೆ ಎಂದರು.

Advertisement

ಜೀವನ ಚರಿತ್ರೆ ಬಗ್ಗೆ ಸಂಪುಟ ಪ್ರಕಟಿಸಿ: ಸಾಹಿತಿ ಡಾ. ಹೊಂಗನೂರು ನಂಜಯ್ಯ ಮಾತನಾಡಿ, ಬಿ. ರಾಚಯ್ಯ ಅವರಂಥ ವ್ಯಕ್ತಿ ಈ ನೆಲದಲ್ಲಿ ಹುಟ್ಟಿ ಇಷ್ಟೊಂದು ಅಭಿವೃ ದ್ಧಿ ಕಾರ್ಯಗಳನ್ನು ಮಾಡಿದ್ದರು ಎಂಬುದು ಇತಿಹಾಸವಾಗಬೇಕು. ಈ ಪೀಳಿಗೆ ಜನರು ಅವರನ್ನು ಸ್ಮರಣೆ ಮಾಡಿಕೊಂಡ ಮಾದರಿಯಲ್ಲಿ ಮುಂದಿನ ಪೀಳಿಗೆಯು ನೆನಪು ಮಾಡಿಕೊಳ್ಳುವಂತಹ ಕಾರ್ಯಕ್ರಮಗಳು ಆಗಬೇಕಾಗಿದೆ. ಅವರ ಜನ್ಮ ಶತಮಾನೋತ್ಸವ‌ವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಜೊತೆಗೆ ಅವರ ಜೀವನ ಚರಿತ್ರೆ ಸಾಧನೆ ಕುರಿತು ಸಂಪುಟವನ್ನು ಪ್ರಕಟಿಸುವ ಚಿಂತನೆ ಮಾಡಿರುವುದಾಗಿ ತಿಳಿಸಿದರು.

ಪ್ರತಿ ವರ್ಷ ಜಯಂತಿ ಆಚರಣೆ: ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ ಮಾತನಾಡಿ, ತಮ್ಮ ತಂದೆ ಬಿ. ರಾಚಯ್ಯ ಅವರು ಅಂದು ಮಾಡಿದ್ದ ಕಾರ್ಯ ಗಳನ್ನು ಸ್ಮರಣೆ ಮಾಡಿಕೊಂಡು ಕುಂಭೇಶ್ವರ ಕಾಲೋನಿಯ ಗ್ರಾಮಸ್ಥರು ಪ್ರತಿ ವರ್ಷ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಹೆಮ್ಮೆ ತಂದಿದೆ. ಅವರ ದೂರದೃಷ್ಟಿತ್ವ ರಾಜಕಾರಣ ಹಾಗೂ ಶೋಷಿತರು ಮತ್ತು ದೀನದಲಿತರು ಎಲ್ಲಾ ವರ್ಗದ ಬಡವರಿಗೆ ಸವಲತ್ತು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದರು. ರಾಜ್ಯದ ಯಾವ ಭಾಗಕ್ಕೆ ಹೋದರು ಸಹ ಅವರ ರಾಚಯ್ಯ ಅವರ ಸೇವೆಯನ್ನು ಸ್ಮರಣೆ ಮಾಡಿಕೊಳ್ಳುತ್ತಾರೆ ಅವರ ಮಕ್ಕಳಾದ ನಮಗೆ ವಿಶೇಷವಾದ ಗೌರವ, ಪ್ರೀತಿಯನ್ನು ನೀಡುತ್ತಿದ್ದಾರೆ. ಜೀವನದಲ್ಲಿ ಇದಕ್ಕಿಂತ ಮಿಗಿಲಾದ ಪುಣ್ಯವಿಲ್ಲ ಎಂದರು.

ಜಿಲ್ಲಾಡಳಿತದಿಂದ ಆಚರಣೆಗೆ ಒತ್ತಾಯ: ಸಾಹಿತಿ ಮಂಜು ಕೋಡಿಉಗನೆ ಮಾತನಾಡಿ, ಬಿ.ರಾಚಯ್ಯ ಅವರ ಜಿಲ್ಲೆಗೆ ನೀಡಿರುವ ಸೇವೆಯನ್ನು ಸ್ಮರಿಸಿ, ಅವರ ಪ್ರಾಮಾಣಿಕತೆ, ಸರಳತೆ ಹಾಗೂ ಸಜ್ಜನಿಕೆಯನ್ನು ಜಿಲ್ಲಾಡಳಿತ ಮನವರಿಕೆ ಮಾಡಿಕೊಂಡು ಬಿ.ರಾಚಯ್ಯನವರ ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತವೇ ಆಚರಣೆ ಮಾಡಬೇಕೇಂದು ಒತ್ತಾಯಿಸಿದರು. ರಂಗಕರ್ಮಿಗಳಾದ ಜನ್ನಿ ಹಾಗೂ ಸಿ.ಎಂ. ನರಸಿಂಹಮೂರ್ತಿ ಜನಪದ ಗೀತೆಗಳನ್ನು ಹಾಡಿದರು. ತಾಪಂ ಮಾಜಿ ಅಧ್ಯಕ್ಷ ಆರ್‌. ಮಹದೇವ್‌, ಮುಖಂಡರಾದ ಬಸವೇಗೌಡ, ಮಹದೇವಯ್ಯ, ನಂಜುಂಡಯ್ಯ, ಮಂಜು, ಸ್ವಾಮಿ, ಜಿ.ಎಂ.ಮರಿಸ್ವಾಮಿ, ಗೋವಿಂದರಾಜು, ನಿಂಗಯ್ಯ, ಕುಮಾರ್‌, ಹೊಂಗನೂರು ಚೇತನ್‌ ಇತ ರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next