Advertisement

ರೇಬಿಸ್‌ ನಿರೋಧಕ ಲಸಿಕೆ ಶಿಬಿರ 

03:13 PM Sep 15, 2018 | |

ಬಡಗನ್ನೂರು : ಅರಿಯಡ್ಕ ಗ್ರಾ.ಪಂ., ಪಶು ಸಂಗೋಪನ ಇಲಾಖೆ ಆಶ್ರಯದಲ್ಲಿ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಶಿಬಿರ ಕೌಡಿಚ್ಚಾರು ಪಶು ಚಿಕಿತ್ಸಾ ಕೇಂದ್ರದಲ್ಲಿ ಮಂಗಳವಾರ ನಡೆಯಿತು. ಪುತ್ತೂರು ತಾಲೂಕು ಸಹಾಯಕ ನಿರ್ದೇಶಕ ಡಾ| ಧರ್ಮಪಾಲ ಅವರು ಮಾಹಿತಿ ನೀಡಿದರು.

Advertisement

ಅರಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಸವಿತಾ ಎಸ್‌., ಉಪಾಧ್ಯಕ್ಷ ರವೀಂದ್ರ ಚಾಕೋಟೆ ಮಾತನಾಡಿದರು. ಪಾಣಾಜೆ ಪಶುವೈದ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಕಾಶ್‌ ಪಾಣಾಜೆ, ಪಶುವೈದ್ಯ ಆಸ್ಪತ್ರೆಯ ಜಾನುವಾರು ಅಧಿಕಾರಿ ಪುಷ್ಪರಾಜ್‌ ಶೆಟ್ಟಿ, ಈಶ್ವರಮಂಗಲ ಹಿರಿಯ ಪಶುವೈದ್ಯ ಪರೀಕ್ಷಕ ಬಸವರಾಜ, ಕಾಣಿಯೂರು ಹಿರಿಯ ಪಶುವೈದ್ಯ ಪರೀಕ್ಷಕ ರಮೇಶ್‌, ಪುತ್ತೂರು ಪಶುವೈದ್ಯ ಸಹಾಯಕ ಪುಂಡರೀಕಾಕ್ಷ, ಕೊಳ್ತಿಗೆ ಪಶು ಆಸ್ಪತ್ರೆಯ ಸಿಬಂದಿ ಸನತ್‌ ಕುಮಾರ್‌, ಶಿವರಾಮ ಮಣಿಯಾಣಿ, ಮಾಜಿ ಉಪಾಧ್ಯಕ್ಷ ಇಕ್ಬಾಲ್‌ ಹುಸೇನ್‌ ಅಭಿವೃದ್ಧಿ ಅಧಿಕಾರಿ ಪದ್ಮಕುಮಾರಿ, ಕಾರ್ಯದರ್ಶಿ ಕೃಷ್ಣ ರಾಜ ಭಟ್‌, ಲೆಕ್ಕ ಸಹಾಯಕ ರವೀಂದ್ರ ಪಾಟೀಲ್‌, ಸಿಬಂದಿ, ರಿಕ್ಷಾ ಚಾಲಕರು ಉಪಸ್ಥಿತರಿದ್ದರು. ಕೌಡಿಚ್ಚಾರು ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶುವೈದ್ಯ ಪರೀಕ್ಷಕ ವೀರಪ್ಪ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next