Advertisement

ಮಳೆ, ಸಿಡಿಲಿನಿಂದ ಹಾನಿ: 24 ಗಂಟೆಯೊಳಗೆ ಪರಿಹಾರ

02:50 AM Jul 18, 2017 | Team Udayavani |

ತತ್‌ಕ್ಷಣ ಸ್ಪಂದಿಸಿ ಕಾರ್ಯತತ್ಪರತೆ ಮೆರೆದ ಕಾರ್ಕಳ ತಾಲೂಕಾಡಳಿತ

Advertisement

ಕಾರ್ಕಳ: ತಾಲೂಕಿನಲ್ಲಿ ರವಿವಾರ ಮಳೆ ಹಾಗೂ ಸಿಡಿಲಿಂದ ಅಲ್ಲಲ್ಲಿ ಸಂಭವಿಸಿದ ಹಾನಿಗೆ ಕಾರ್ಕಳ ತಾಲೂಕಾಡಳಿತ ತತ್‌ಕ್ಷಣ ಸ್ಪಂದಿಸಿದ್ದು ಹಾನಿ ಸಂಭವಿಸಿದ 24 ಗಂಟೆಯೊಳಗೆ ಪರಿಹಾರ ಒದಗಿಸಿ ಕಾರ್ಯತತ್ಪರತೆ ಮೆರೆದಿದೆ. ತಾಲೂಕಿನ ಬೆಳಂಜೆ ಗ್ರಾಮದಲ್ಲಿ ಸುಮಾರು 12 ಮನೆಗಳಿಗೆ ಒಟ್ಟು 6 ಲಕ್ಷ ರೂ ಹಾನಿ ಉಂಟಾಗಿದ್ದು ಎಲ್ಲಾ ಮನೆಗಳಿಗೂ ತಾಲೂಕಾಡಳಿತ ಪರಿಹಾರ ಒದಗಿಸಿದೆ. ಬೇಳಂಜೆ ಗ್ರಾಮದ ತಮ್ಮಯ್ಯ ನಾಯ್ಕ, ನಾಗು ನಾಯ್ಕ, ಕೃಷ್ಣ , ಗುಲಾಬಿ, ಗೀತಾ, ಶಾರದಾ ಬಾಯಿ, ಸಮತಿ ಶೆಡ್ತಿ, ವನಜ ಬಾಯಿ, ಪುರುಷ ನಾಯ್ಕ, ಪುಟ್ಟ ನಾಯ್ಕ, ಗಂಗೆ, ಮಲ್ಲು ನಾಯ್ಕ ಅವರ ಮನೆಗಳಿಗೆ ಸಿಡಿಲು ಬಡಿದು ಮನೆಗೆ ಹಾನಿ ಉಂಟಾಗಿತ್ತು. ಹಾಗೂ ಜಾರ್ಕಳ ಗ್ರಾಮದ ಮನೆಯೊಂದರಲ್ಲಿ ಸಿಡಿಲು ಬಡಿದು ದನವೊಂದು ಮೃತಪಟ್ಟಿತ್ತು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಾರ್ಕಳ ತಹಶೀಲ್ದಾರ್‌ ಟಿ.ಜಿ.ಗುರುಪ್ರಸಾದ್‌ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿದ್ದಾರೆ.

ಮಳೆ ಹಾನಿಯ ಪರಿಹಾರವನ್ನು ತಾಲೂಕಾಡಳಿದ ವತಿಯಿಂದ ಶೀಘ್ರವೇ ಒದಗಿಸಲಾಗಿದೆ.ಎಲ್ಲಿ ಹಾನಿ ಸಂಭವಿಸಿದರೂ ತತ್‌ಕ್ಷಣ ನಮ್ಮ ಗಮನಕ್ಕೆ ತನ್ನಿ ಶೀಘ್ರವೇ ಪರಿಹಾರ ಒದಗಿಸಲು ತಾಲೂಕಾಡಳಿತ ಬದ್ಧವಾಗಿದೆ.
– ಟಿ.ಜಿ.ಗುರುಪ್ರಸಾದ್‌, ಕಾರ್ಕಳ ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next