Advertisement

ಮಂಡ್ಯ: ರೈತನ ಜಮೀನಿನಲ್ಲಿ 18 ಅಡಿ ಉದ್ದದ ಹೆಬ್ಬಾವು ಸೆರೆ

10:27 AM Nov 21, 2020 | keerthan |

ಮಂಡ್ಯ: ಸುಮಾರು 18 ಅಡಿ ಉದ್ದದ ಹೆಬ್ಬಾವೊಂದು ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಹುಣಸೇಮರದ ಕಟ್ಟೆ ಬಳಿಯಿರುವ ಮಲ್ಲಯ್ಯ ಎನ್ನುವವರ ಜಮೀನಿನಲ್ಲಿ ಈ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.

ರೈತ ಜಮೀನಿನಲ್ಲಿ ಹುಲ್ಲು ಕುಯ್ಯಲು ಹೋದ ಸಂದರ್ಭದಲ್ಲಿ ಈ 18 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ನಂತರ ಗ್ರಾಮಸ್ಥರೇ ಹೆಬ್ಬಾವನ್ನು ಹಿಡಿದು ಮೈಸೂರು ಮೃಗಾಲಯಕ್ಕೆ ಬಿಡಲು ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಇದನ್ನೂ ಓದಿ:ನಟಿ ಉಮಾಶ್ರೀ ಅವರ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

Advertisement
Advertisement

Udayavani is now on Telegram. Click here to join our channel and stay updated with the latest news.

Next