Advertisement

ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಹಸ್ತಲಾಘವ ಬದಲು ನಮಸ್ತೆ: ಸಿಂಧು

09:58 AM Mar 10, 2020 | sudhir |

ಹೈದಾರಾಬಾದ್‌: ಮುಂಬರುವ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಹಸ್ತಲಾಘವ ಮಾಡುವ ಬದಲು ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ನಮಸ್ತೆ ಮಾಡುತ್ತೇನೆ ಎಂಬುದಾಗಿ ಪಿ.ವಿ. ಸಿಂಧು ಹೇಳಿದ್ದಾರೆ.

Advertisement

ಎಲ್ಲ ಕಡೆ ಕೊರೊನಾ ವೈರಸ್‌ ಹಬ್ಬಿದ್ದು, ಮುಂಜಾಗ್ರತಾ ಕ್ರಮವಾಗಿ ಈ ರೀತಿ ಮಾಡುವುದಾಗಿ ಸಿಂಧು ಸ್ಪಷ್ಟಪಡಿಸಿದರು. ಉಳಿದಂತೆ ಈ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಿ ಒಲಿಂಪಿಕ್ಸ್‌ಗೆ ಬೇಕಾದ ಪೂರ್ವ ತಯಾರಿ ಮಾಡಲಿದ್ದೇನೆ ಎಂದೂ ಅವರು ಹೇಳಿದರು.

ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌, ಸಮೀರ್‌ ವರ್ಮ, ಎಚ್‌.ಎಸ್‌. ಪ್ರಣಯ್‌, ಸೌರಭ್‌ ವರ್ಮ ಕಣದಲ್ಲಿದ್ದು, ಈಗಾಗಲೇ ಲಂಡನ್‌ ತಲುಪಿದ್ದಾರೆ. ಒಲಿಂಪಿಕ್ಸ್‌ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಇವರೆಲ್ಲ ಉತ್ತಮ ಮಟ್ಟದ ಪ್ರದರ್ಶನ ನೀಡಬೇಕಿದೆ. ಇದಕ್ಕಾಗಿ ರವಿವಾರದಿಂದಲೇ ಅಭ್ಯಾಸದಲ್ಲಿ ತೊಡಗಿದ್ದಾರೆ. ಮಾ. 11ರಿಂದ ಈ ಪ್ರತಿಷ್ಠಿತ ಕೂಟ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next