Advertisement

ಪುತ್ತೂರಿನಲ್ಲಿ ಕಾರು ಅಪಘಾತ,ವಿನಯ್ ಕುಮಾರ್ ಸೊರಕೆ ಆಸ್ಪತ್ರೆಗೆ ದಾಖಲು

02:37 PM Mar 13, 2017 | Team Udayavani |

ಪುತ್ತೂರು: ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ವಿನಯ್ ಕುಮಾರ್ ಸೊರಕೆ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಸೋಮವಾರ ಪುತ್ತೂರಿನ ಉರ್ಲಾಂಡಿ ಸಮೀಪ ಸಂಭವಿಸಿದ್ದು, ಸೊರಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಸೊರಕೆ ಅವರ ಕಾರು ಹಾಗೂ ಮಾರುತಿ ಒಮ್ನಿ ನಡುವೆ ಡಿಕ್ಕಿಯಾಗಿದ್ದು, ಎರಡು ವಾಹನಗಳು ತೀವ್ರ ಜಖಂಗೊಂಡಿರುವುದಾಗಿ ವರದಿ ವಿವರಿಸಿದೆ. 

ಪುತ್ತೂರು ನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸೊರಕೆ ಹಾಗೂ ಕಾರು ಚಾಲಕನಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
 

Advertisement

Advertisement

Udayavani is now on Telegram. Click here to join our channel and stay updated with the latest news.

Next