Advertisement

Puttur: ಟಯರ್‌ ಜೋಡಿಸುತ್ತಿದ್ದ ವೇಳೆ ಸಿಡಿದ ರಿಂಗ್‌: ಓರ್ವ ಗಂಭೀರ

08:34 PM Jul 23, 2024 | Team Udayavani |

ಪುತ್ತೂರು: ಪರ್ಲಡ್ಕದ ಗೋಳಿಕಟ್ಟೆ ಮಸೀದಿ ಸನಿಹದ ರಸ್ತೆ ಬದಿ ಲಾರಿಗೆ ಟಯರ್‌ ಜೋಡಿಸುತ್ತಿದ್ದ ವೇಳೆ ಏಕಾಏಕಿಯಾಗಿ ಒಳಭಾಗದ ರಿಂಗ್‌ ರಭಸವಾಗಿ ಹೊರಚಿಮ್ಮಿದ್ದ ಪರಿಣಾಮ ದುರಸ್ತಿ ಮಾಡುತ್ತಿದ್ದ ಕೆಲಸಗಾರ ದೂರಕ್ಕೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಜು. 22ರಂದು ರಾತ್ರಿ ನಡೆದಿದೆ.

Advertisement

ಕರಾಯ ನಿವಾಸಿ ರಶೀದ್‌ ಗಾಯಗೊಂಡ ವ್ಯಕ್ತಿ. ಗೋಳಿಕಟ್ಟೆ ಮಸೀದಿ ಲಾರಿಯೊಂದರ ಟಯರ್‌ ಪಂಕ್ಚರ್‌ ಆಗಿತ್ತು. ಅದರ ಚಾಲಕ ಕರಾಯಕ್ಕೆ ತೆರಳಿ ಟಯರ್‌ ಪಂಕ್ಚರ್‌ ಹಾಕಿಸಿಕೊಂಡು ದುರಸ್ತಿ ಕೆಲಸಗಾರ ರಶೀದ್‌ ಜತೆ ವಾಪಸ್‌ ಪರ್ಲಡ್ಕಕ್ಕೆ ಬಂದಿದ್ದರು. ರಶೀದ್‌ ರಾತ್ರಿ ಟಯರ್‌ ಜೋಡಿಸುತ್ತಿದ್ದ ವೇಳೆ ಟಯರ್‌ನೊಳಗಿನ ರಿಂಗ್‌ ಸಿಡಿದು ಹೊರ ಚಿಮ್ಮಿದ್ದು, ಅದರ ರಭಸಕ್ಕೆ ಡಿಸ್ಕ್ ಸಹಿತ ರಶೀದ್‌ ಅವರು ರಸ್ತೆ ಬದಿಯ ಪಕ್ಕದ ಆವರಣ ಗೋಡೆಗೆ ಎಸೆಯಲ್ಪಟ್ಟಿದ್ದಾರೆ. ಇದೇ ದುರಸ್ತಿ ಸಂದರ್ಭ ನಿಂತಿದ್ದ ಚಾಲಕನೂ ದೂರಕ್ಕೆ ಎಸೆಯಲ್ಪಟ್ಟಿದ್ದು, ಅವರಿಗೂ ಗಾಯವಾಗಿದೆ.

ಘಟನೆಯಿಂದ ತೀವ್ರ ಗಾಯಗೊಂಡಿದ್ದ ರಶೀದ್‌ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next