Advertisement

Puttur: ಮರಗಳಿಂದ ತೊಗಟೆ‌ ಕೆತ್ತಿ ಸಾಗಾಟ ಮಾಡುತ್ತಿದ್ದ ಕೇರಳದ ಮೂವರ ಬಂಧನ

08:55 AM Sep 01, 2024 | Team Udayavani |

ಪುತ್ತೂರು: ಬಂಟಾಜೆ ರಕ್ಷಿತಾರಣ್ಯದಲ್ಲಿ ಮರಗಳಿಂದ ತೊಗಟೆಯನ್ನು‌ ಕೆತ್ತಿ ಸಾಗಾಟ ಮಾಡಿದ ಕೇರಳದ ಮೂವರು ಆರೋಪಿಗಳನ್ನು ಪುತ್ತೂರು ಅರಣ್ಯ ಇಲಾಖೆಯವರು ಬಂಧಿಸಿದ ಘಟನೆ ನಡೆದಿದೆ.

Advertisement

ಕಾಸರಗೋಡು ಜಿಲ್ಲೆಯ ಬದಿಯಡ್ಕದ ಸುನಿಲ್ ಕುಮಾರ್, ಸುರೇಶ್, ದಿನೇಶ್ ಬಂಧಿತ ಆರೋಪಿಗಳು.

ಬನ್ಪು, ಅಂಡಿಪುನರ್, ಬೇಂಗ ಜಾತಿಯ ಮರಗಳ ತೊಗಟೆಯನ್ನು ಕೆತ್ತಿ ಕೊಂಡೊಯ್ಯಲಾಗಿದೆ. ತೊಗಟೆ ಕೆತ್ತುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ.

ಬಂಧಿತರನ್ನು ಶನಿವಾರ (ಶ.31) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next