Advertisement

ಪುತ್ತೂರು ಧರ್ಮಪ್ರಾಂತ ಡಾ|ಜಾರ್ಜ್‌ ನೂತನ ಬಿಷಪ್‌

07:30 AM Aug 07, 2017 | Team Udayavani |

ಕಡಬ: ಮಲಂಕರ ಸಿರಿಯನ್‌ ಕೆಥೋಲಿಕ್‌ ಧರ್ಮಸಭೆಯ ಪುತ್ತೂರು ಧರ್ಮಪ್ರಾಂತದ ನೂತನ ಧರ್ಮಾಧ್ಯಕ್ಷ (ಬಿಷಪ್‌)ರಾಗಿ ರೈ| ರೆ| ಡಾ| ಜಾರ್ಜ್‌ ಕಾಲಾಯಿಲ್‌ ಅವರನ್ನು ಕೆಥೋಲಿಕ್‌ ಧರ್ಮಸಭೆಯ ಜಗದ್ಗುರು ಪೋಪ್‌ ಫ್ರಾನ್ಸಿಸ್‌ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Advertisement

ಶನಿವಾರ ವ್ಯಾಟಿಕನ್‌ನ ಸೈಂಟ್‌ ಪೀಟರ್ ಬಸಿಲಿಕಾದಲ್ಲಿ ಪೋಪ್‌ ಫ್ರಾನ್ಸಿಸ್‌ ಅವರು ನೇಮಕದ ಆದೇಶ ಹೊರಡಿಸಿದ್ದು, ಅದೇ ವೇಳೆ ಮಲಂಕರ ಸಿರಿಯನ್‌ ಕೆಥೋಲಿಕ್‌ ಧರ್ಮಸಭೆಯ ಕೇಂದ್ರ ತಿರುವನಂತಪುರದ ಸೈಂಟ್‌ ಮೆರೀಸ್‌ ಕೆಥೆಡ್ರಲ್‌ನಲ್ಲಿ ಧರ್ಮಸಭೆಯ ಮುಖ್ಯಸ್ಥ ಮೋರಾನ್‌ ಮೋರ್‌ ಬಸೇಲಿಯೋಸ್‌ ಕಾರ್ಡಿನಲ್‌ ಕ್ಲೀಮೀಸ್‌ ಕಾತೋಲಿಕ್ಕೋಸ್‌ ಹಾಗೂ ನೂಜಿಬಾಳ್ತಿಲದ ಪ್ರೋ ಕೆಥೆಡ್ರಲ್‌ನಲ್ಲಿ ಪುತ್ತೂರು ಧರ್ಮಪ್ರಾಂತದ ಕುಲಪತಿ ವಂ| ಫಿಲಿಪ್‌ ನೆಲ್ಲಿವಿಳ ಅವರು ಪೋಪ್‌ ಅವರ ಆದೇಶವನ್ನು ಪ್ರಕಟಿಸಿದರು.

ಕಳೆದ 7 ವರ್ಷಗಳಿಂದ 9 ಕಂದಾಯ ಜಿಲ್ಲೆಗಳ ವ್ಯಾಪ್ತಿ  ಯನ್ನು ಹೊಂದಿರುವ ನೂತನ ಪುತ್ತೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ರೈ| ರೆ|  ಡಾ| ಗೀವರ್ಗೀಸ್‌ ಮಾರ್‌ ದಿವನ್ನಾಸಿಯೋಸ್‌ ಅವರ ನಿವೃತ್ತಿಯ ಬಳಿಕ ಕಳೆದ 7 ತಿಂಗಳಿನಿಂದ ಡಾ| ಜಾರ್ಜ್‌ ಕಾಲಾಯಿಲ್‌ ಅವರು ಧರ್ಮಪ್ರಾಂತದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವ ಹಿಸು ತ್ತಿದ್ದರು.

ಸೆ. 21: ಪಟ್ಟಾಭಿಷೇಕ
ನೂತನ ಧರ್ಮಾಧ್ಯಕ್ಷರ ಪಟ್ಟಾಭಿ ಷೇಕ ಸಮಾರಂಭವು ಸೆ. 21 ರಂದು ಕೇರಳದ ಪಟ್ಟನಂತಿಟ್ಟ ಅಡೂರಿ ನಲ್ಲಿ ಜರಗಲಿದೆ. ಸೆ. 30ರಂದು ನೂಜಿ ಬಾಳ್ತಿಲದ ಪ್ರೋ ಕೆಥೆಡ್ರಲ್‌ನಲ್ಲಿ ಪೀಠಾ ರೋಹಣ ಸಮಾ ರಂಭ ನೆರವೇರಲಿದೆ. 1986ರಲ್ಲಿ ಬತ್ತೇರಿ ಧರ್ಮಪ್ರಾಂತಕ್ಕಾಗಿ ಸಿರಿಲ್‌ ಬಸೇಲಿಯೋಸ್‌ ಕಾತೋಲಿಕ್ಕೋಸರಿಂದ ಯಾಜಕ ದೀಕ್ಷೆಯನ್ನು ಪಡೆದ ಡಾ| ಕಾಲಾಯಿಲ್‌ ಅವರು 1994ರಲ್ಲಿ ರೋಮ್‌ನ ಗ್ರಿಗೋರಿಯನ್‌ ವಿ.ವಿ.ಯಿಂದ ದೈವಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿ ಪಡೆದರು. ವಿವಿಧೆಡೆ ಧರ್ಮಗುರುವಾಗಿ, ಪ್ರಾಧ್ಯಾ ಪಕರಾಗಿ ಸೇವೆ ಸಲ್ಲಿಸಿರುವ ಅವರು ಪುತ್ತೂರು ಧರ್ಮ ಪ್ರಾಂತದ ವಿಕಾರ್‌ ಜನರಲ್‌ ಆಗಿಯೂ ಸೇವೆ ಸಲ್ಲಿಸಿರು ತ್ತಾರೆ. ಆ. 8ರಂದು ಅಪರಾಹ್ನ 3 ಗಂಟೆಗೆ ನೂಜಿಬಾಳ್ತಿಲದ ಸೈಂಟ್‌ ಮೇರೀಸ್‌ ಪ್ರೋ ಕೆಥೆಡ್ರಲ್‌ಗೆ ಆಗಮಿಸುವ ನೂತನ ಧರ್ಮಾಧಕ್ಷರಿಗೆ ಅದ್ದೂರಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next