Advertisement

Puttur ಪಟ್ಟೆ: ದಿನಸಿ ಅಂಗಡಿ ಬೀಗ ಮುರಿದು ಹಣ ಕಳ್ಳತನ

11:56 PM Oct 08, 2023 | Team Udayavani |

ಪುತ್ತೂರು: ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ಪಟ್ಟೆ ಶಾಲೆಯ ಬಳಿಯ ದಿನಸಿ ಅಂಗಡಿಯ ಬೀಗ ಮುರಿದು ಕಳ್ಳರು ನುಗ್ಗಿದ ಘಟನೆ ಅ. 8ರಂದು ನಡೆದಿದೆ.

Advertisement

ರವಿವಾರ ಬೆಳಗ್ಗೆ ಅಂಗಡಿ ಮಾಲಕ ಶೇಖರ್‌ ನಾಯಕ್‌ ಅಂಗಡಿಗೆ ಬಂದಾಗ ಕಳ್ಳತನ ನಡೆದ ಬಗ್ಗೆ ಬೆಳಕಿಗೆ ಬಂದಿದೆ.

ಅಂಗಡಿಯ ಡ್ರವಾರ್‌ನಿಂದ ಚಿಲ್ಲರೆ ಹಣ ಕಳವಾಗಿದೆ. ತತ್‌ಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಹೊಯ್ಸಳ ಪೊಲೀಸರು ಹಾಗೂ ಈಶ್ವರಮಂಗಲ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next