Advertisement

ದರ್ಬೆಯಲ್ಲಿ ಹಲ್ಲೆ, ಕೊಲೆ ಬೆದರಿಕೆ: ವಾರಂಟ್‌ ಆರೋಪಿಯ ಸೆರೆ

09:55 PM Feb 19, 2023 | Team Udayavani |

ಪುತ್ತೂರು: ದರ್ಬೆಯಲ್ಲಿ ಹಲ್ಲೆ ಮತ್ತು ಕೊಲೆ ಬೆದರಿಕೆಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ 8 ತಿಂಗಳಿನಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಾಡನ್ನೂರು ಗ್ರಾಮದ ಆರೋಪಿಯನ್ನು ಪುತ್ತೂರು ಪೊಲೀಸರು ಫೆ. 19ರಂದು ಸವಣೂರು ಅಪ್ರಾಝ ಫೇರಾ ಡೈಸ್‌ ಫ್ಲ್ಯಾಟ್‌ನಿಂದ ಬಂಧಿಸಿದ್ದಾರೆ.

Advertisement

ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ಮಾಡನ್ನೂರು ಗ್ರಾಮದ ಕೊಂಬಲಿ ನಿವಾಸಿ ಸುಲೈಮಾನ್‌ ಬಂಧಿತ ಆರೋಪಿ. ಆತ 2021ರಲ್ಲಿ ದರ್ಬೆಯಲ್ಲಿ ಹೊಟೇಲ್‌ ವೊಂದಕ್ಕೆ ಅಕ್ರಮವಾಗಿ ನುಗ್ಗಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿರುವ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಲ್ಲಿ ಆರೋಪಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಆರೋಪಿ ವಿರುದ್ಧ ವಾರಂಟ್‌ ಜಾರಿ ಮಾಡಲಾಗಿತ್ತು.

ಇದನ್ನೂ ಓದಿ :ಭಾರಿ ಬಿಕ್ಕಟ್ಟು: ನಾವು ದಿವಾಳಿಯಾಗಿದ್ದೇವೆ ಎಂದ ಪಾಕ್ ರಕ್ಷಣಾ ಸಚಿವ !

Advertisement

Udayavani is now on Telegram. Click here to join our channel and stay updated with the latest news.

Next