Advertisement

ಪುತ್ತೂರು:ನಿರ್ಮಾಣ ಹಂತದ ಕಟ್ಟಡ ಕುಸಿತ 2 ಸಾವು

12:15 PM Apr 24, 2018 | Team Udayavani |

ಪುತ್ತೂರು: ನೆಲ್ಲಿಕಟ್ಟೆ ಹತ್ತಿರವಿರುವ ಬಸ್ ನಿಲ್ದಾಣ ಸಮೀಪ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ದುರ್ಘ‌ಟನೆ ಮಂಗಳವಾರ ಬೆಳಗ್ಗೆ  10 ಗಂಟೆ ವೇಳೆಗೆ ನಡೆದಿದೆ.

Advertisement

ಕಟ್ಟಡ ನಿರ್ಮಾಣ ಸ್ಥಳದಲ್ಲಿ ಆರು ಜನ ಕಟ್ಟಡ ಕಾರ್ಮಿಕರು ಭೂಮಿಯಿಂದ ಸುಮಾರು 30 ಅಡಿ ಆಳದಲ್ಲಿ ಕೆಲಸ ಮಾಡುತ್ತಿರುವಾಗ ಮಣ್ಣಿನ ಗುಡ್ಡೆ ಕುಸಿದು ನಾಲ್ಕು ಜನ ಮಣ್ಣಿನ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಕೂಡಲೇ ಸ್ಥಳೀಯರ ಸಹಕಾರದಿಂದ ಹಾಗೂ ಅಗ್ನಿಶಾಮಕ ತುರ್ತು ಸೇವೆಗಳ ಸಹಾಯದಿಂದ  ಇಬ್ಬರು  ಕಾರ್ಮಿಕರನ್ನು ರಚಿಸಲಾಗಿದೆ. 

ಮೃತ ದುರ್ದೈವಿಗಳು  ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಅಡವಿಬಾವಿ ಗ್ರಾಮದ ಪದ್ಮನಾಭ (35 )  ಮತ್ತು ಶಿವಣ್ಣ(40) . 

ಮಹಾಂತೇಶ್ ಹಾಗೂ ಯಶವಂತ ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next