Advertisement

ಪುತ್ತಿಗೆ ಶ್ರೀಗಳಿಂದ ವಿದೇಶದಲ್ಲಿ 9ನೇ ‌ಮಂದಿರ ಸ್ಥಾಪನೆ

04:05 PM Feb 12, 2018 | Sharanya Alva |

ಉಡುಪಿ: ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಆಸ್ಟ್ರೇಲಿಯದ ಸಿಡ್ನಿ ನಗರದಲ್ಲಿ ಶ್ರೀ ವೆಂಕಟಕೃಷ್ಣ
ವೃಂದಾವನವನ್ನು ವೇದ ಮಂತ್ರಗಳ ನಡುವೆ ಉದ್ಘಾಟಿಸಿದರು. ಶ್ರೀಪಾದರು ವಿದೇಶದಲ್ಲಿ ಸ್ಥಾಪಿಸಿದ 9ನೇ ದೇವಸ್ಥಾನ ಮತ್ತು ಆಸ್ಟ್ರೇಲಿಯದಲ್ಲಿ 2ನೆಯದ್ದಾಗಿದೆ.

Advertisement

ಈ ದೇವಸ್ಥಾನ ಸ್ಥಾಪನೆಗೊಂಡಿದ್ದು ಕೇವಲ ಹತ್ತೇ ದಿನಗಳ ದಾಖಲೆ ಅವಧಿಯಲ್ಲಿ. ಇಲ್ಲಿ ಕೃಷ್ಣ ಮತ್ತು ಮಂತ್ರಾಲಯ
ರಾಘವೇಂದ್ರ ಸ್ವಾಮಿಗಳ ವೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ.

ಸಪ್ತಶುದ್ಧಿ, ಪ್ರಾಕಾರ ಶುದ್ಧಿ, ಗಣಪತಿ ಹೋಮ, ತುಳಸಿ ಪೂಜೆ, ದ್ವಾರಪೂಜೆ ಮೊದಲಾದ ಧಾರ್ಮಿಕ ಆಚರಣೆಗಳ ಬಳಿಕ
ಪ್ರತಿಷ್ಠಾಪನೆ ನೆರವೇರಿಸಲಾಯಿತು. ವಿಷ್ಣು ಸಹಸ್ರನಾಮ, ಮಂಗಲಾಷ್ಟಕ ಮೊದಲಾದ ಪಾರಾಯಣಗಳನ್ನು ಪಾಲ್ಗೊಂಡ
ಸಾಮಾನ್ಯ ಭಕ್ತರೂ ಪಠಿಸಿದರು. ಇಲ್ಲಿ ದೇವಸ್ಥಾನ ಸ್ಥಾಪಿಸುವಲ್ಲಿ ಸಹಕರಿಸಿದ ಭಕ್ತರು, ಉಂಟಾದ ಪ್ರೇರಣೆ ಕುರಿತು ಶ್ರೀಪಾದರು ವಿವರಿಸಿದರು. ಭಕ್ತ ಜಗನ್‌ ಅವರು ಸ್ವಾಗತಿಸಿ ದೇವಸ್ಥಾನದಲ್ಲಿ ನಡೆಯುವ ಸೇವೆಗಳನ್ನು ವಿವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next