Advertisement

Udupi ಪುತ್ತಿಗೆ ಪರ್ಯಾಯ; “ಹರ್ಷ’ ಸ್ವರಾಂಜಲಿಯ ಮೆರುಗು

12:02 AM Jan 18, 2024 | Team Udayavani |

ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವ ಪ್ರಯುಕ್ತ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ “ಹರ್ಷ’ ಸ್ವರಾಂಜಲಿ ಕಾರ್ಯಕ್ರಮ ಬುಧವಾರ ಅಜ್ಜರಕಾಡು ಟೌನ್‌ಹಾಲ್‌ನಲ್ಲಿ ನೆರವೇರಿತು.

Advertisement

ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಹರ್ಷ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಸೂರ್ಯಪ್ರಕಾಶ್‌ ಕೆ., ಆಪರೇಶನ್‌ ಡೈರೆಕ್ಟರ್‌ ಅಶೋಕ್‌ ಕುಮಾರ್‌ ಕೆ., ಮಾರ್ಕೆಟಿಂಗ್‌ ಡೈರೆಕ್ಟರ್‌ ಹರೀಶ್‌ ಎಂ., ಎಚ್‌ಆರ್‌ ಡೈರೆಕ್ಟರ್‌ ಸುರೇಶ್‌ ಎಂ., ಇನಾಸ್ಟ್ರಕ್ಚರ್ ಡೈರೆಕ್ಟರ್‌ ರಾಜೇಶ್‌ ಉದ್ಘಾಟಿಸಿದರು.

ಚಿತ್ರನಟಿ ವಿನಯಾ ಪ್ರಸಾದ್‌ ಕಾರ್ಯಕ್ರಮ ನಡೆಸಿಕೊಟ್ಟರು. ಈ ಬಾರಿಯ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅರಾಜ್‌ ಎಂಬ ಯುವ ಪ್ರತಿಭೆಗಳ ತಂಡ ಹರ್ಷ ಸ್ವರಾಂಜಲಿ ಕಾರ್ಯಕ್ರಮದ ಮೂಲಕ ಸಂಗೀತ ಲೋಕವನ್ನೇ ಸೃಷ್ಟಿಸಿ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿದರು. ಪ್ರತೀಕ್‌ ಸಿಂಗ್‌ ಗಾಯನಕ್ಕೆ ಇಶಾನ್‌ ಘೋಷ್‌ (ತಬಲಾ), ಮೆಹ್ತಾಬ್‌ ಅಲಿ, ನಿಯಾಝ್ (ಸಿತಾರ್‌), ವನರಾಜ್‌ ಶಾಸ್ತ್ರೀ (ಸಾರಂಗಿ), ಎಸ್‌. ಆಕಾಶ್‌ (ಕೊಳಲು) ಹಾಗೂ ಇನ್ನಿತರ ಕಲಾವಿದರು ಸಾಥ್‌ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next