Advertisement

ಸಾಧಕರಿಗೆ “ಪುಟ್ಟರಾಜ ಪುರಸ್ಕಾರ’

04:01 PM Mar 06, 2020 | Suhan S |

ಹಾವೇರಿ: ತಾಲೂಕಿನ ದೇವಗಿರಿಯ ಪಂಡಿತ್‌ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಪುಟ್ಟರಾಜರ 106ನೇ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪುಟ್ಟರಾಜ ಪುರಸ್ಕಾರ ಪ್ರದಾನ ಮಾಡಿ ಸನ್ಮಾನಿಸಲಾಯಿತು.

Advertisement

ಕುಮಾರದೇವರು ಹಿರೇಮಠ ಅವರಿಗೆ ಜ್ಞಾನ ಸಿರಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ| ಎಸ್‌ .ಪಿ.ಬಳಿಗಾರ ಅವರಿಗೆ ವೈದ್ಯ ಸಿರಿ, ಡಾ| ಮೃತ್ಯುಂಜಯ ಅಗಡಿ, ಪಂಡಿತ ಮೌನೇಶಕುಮಾರ ಛಾವಣಿ ಅವರಿಗೆಸಂಗೀತ ಸಿರಿ, ಸೋಮಶೇಖರ ರಾವಳ ಅವರಿಗೆ ರಂಗಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಗ್ರಾಮಕ್ಕೆ ಮರಳಿದ ಜಗದೀಶ ಬಸವಣ್ಣೆಪ್ಪ ಸುಳ್ಳಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪುಟ್ಟರಾಜರ ಜಯಂತಿ ಅಂಗವಾಗಿ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ದೇವಗಿರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗವಾಯಿಗಳ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕೂಡಲ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಾಂಪತ್ಯ ಜೀವನ ಆರಂಭಿಸುತ್ತಿರುವ ನವ ದಂಪತಿಗಳು ಪರಸ್ಪರ ನಂಬಿಕೆ, ಹೊಂದಾಣಿಕೆಯಿಂದ ಸಾರ್ಥಕ ಜೀವನ ಸಾಗಿಸಬೇಕು ಎಂದರು.

ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕÒ‌ ಯು.ಬಿ.ಬಣಕಾರ ಮಾತನಾಡಿ, ಪುಟ್ಟರಾಜರು ನಾಡಿನ ಅನೇಕ ಸಾಧಕರಿಗೆ ಪ್ರೇರಣೆಯಾಗಿದ್ದಾರೆ. ಗವಾಯಿಗಳು ಸಂಗೀತದ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಬಹುಪಾಲು ಜನ ಗವಾಯಿ ಅವರನ್ನು ಪ್ರೇರಣೆಯಾಗಿಸಿಕೊಂಡು ಸಾಧನೆ ಮಾಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದವರಿದ್ದಾರೆ. ಅಂಧರ ಬಾಳಿಗೆ ದಾರಿದೀಪದಂತೆ ಪುಟ್ಟರಾಜರು ಸದಾ ಪ್ರೇರಣೆಯಾಗಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾ ಪಂಚಾಯಿತಿ ಸದಸ್ಯ ವಿರೂಪಾಕಪ್ಪ ಕಡ್ಲಿ, ತಾಪಂ ಸದಸ್ಯ ಸತೀಶ ಸಂದಿಮನಿ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಮುತ್ತಣ್ಣ ಯಲಿಗಾರ, ಪ್ರಭಾಕರ ಮಂಗಳೂರು, ವಿ.ವಿ.ಹಿರೇಮಠ, ಬಸವರಾಜ ಬೆಳವಡಿ, ಸಣ್ಣಪ್ಪ ಮಾಳಿ ಇತರರು ಇದ್ದರು. ವಿವಿಧ ಕಲಾವಿದರಿಂದ ಸಂಗೀತ ಸಮಾರಾಧನೆ, ಭರತನಾಟ್ಯ ಕಾರ್ಯಕ್ರಮ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next