Advertisement

ಪೇಜಾವರ ಶ್ರೀಗಳಿಂದ ಮಂತ್ರಾಲಯದಲ್ಲಿ ತುಂಗಭದ್ರಾ ಪುಷ್ಕರ ಸ್ನಾನ

03:30 PM Nov 21, 2020 | keerthan |

ಉಡುಪಿ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಂತ್ರಾಲಯದಲ್ಲಿ ಶನಿವಾರ ಸುಬುಧೇಂದ್ರ ತೀರ್ಥ ಶ್ರೀಗಳು ಮತ್ತು ತಮ್ಮ ಶಿಷ್ಯರೊಂದಿಗೆ ಹನ್ನೆರಡು ವರ್ಷಗಳಿಗೊಮ್ಮೆ ಬರುವ ಪವಿತ್ರ ತುಂಗಭದ್ರಾ ಪುಷ್ಕರ ಸ್ನಾನಗೈದರು.

Advertisement

ಪುಷ್ಕರ ಸ್ನಾನದ ಬಳಿಕ ಗುರುರಾಯರ ದರ್ಶನ ಪಡೆದು ಸನ್ನಿಧಿಯ ಮುಂಭಾಗ ವಿದ್ಯಾರ್ಥಿಗಳಿಗೆ ಶ್ರೀ ಮನ್ನ್ಯಾಯ ಸುಧಾ ಪಾಠ ಮಾಡಿದರು.ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಗುರುರಾಯರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ:ಕಿಷ್ಕಿಂಧೆ ಬಳಿಯ ಅತೀ ಎತ್ತರದ ಹನುಮಾನ್ ಮೂರ್ತಿ ಶಿಲೆಗಳಿಗೆ ಪೇಜಾವರ ಶ್ರೀಗಳಿಂದ ಪೂಜೆ !

‌ಮಂತ್ರಾಲಯದ ಸುಬುಧೇಂದ್ರ ತೀರ್ಥರನ್ನು ಭೇಟಿಯಾಗಿ ರಾಮಮಂದಿರ ನಿರ್ಮಾಣ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next