Advertisement

ತನಗೆ ಕೋವಿಡ್-19 ಇದೆಯೆಂದು ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗಿರಲಿಲ್ಲ ಸೋಂಕು!

09:44 AM Mar 28, 2020 | keerthan |

ಹೊಸದಿಲ್ಲಿ: ತನಗೆ ಕೋವಿಡ್-19 ಸೋಂಕು ಇದೆಯೆಂದು ಭಾವಿಸಿ ಆಸ್ಪತ್ರೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೆ ಸೋಂಕು ಲಕ್ಷಣಗಳು ಇರಲಿಲ್ಲ ಎಂದು ತಿಳಿದುಬಂದಿದೆ.

Advertisement

ಇತ್ತೀಚೆಗೆ ಆಸ್ಟ್ರೇಲಿಯಾದ ಸಿಡ್ನಿಯಿಂದ ಭಾರತಕ್ಕೆ ಆಗಮಿಸಿದ್ದ ಯುವಕನನ್ನು ಕೋವಿಡ್-19 ಸೋಂಕು ಶಂಕೆಯಿಂದ ಮಾರ್ಚ್ 18ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನಗೆ ಕೋವಿಡ್-19 ಸೋಂಕು ತಾಗಿದೆ ಎಂದು ಭಯಪಟ್ಟ ಆತ ವೈದ್ಯಕೀಯ ವರದಿ ಬರುವುದರ ಒಳಗೆ ಆಸ್ಪತ್ರೆಯ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಸದ್ಯ ಆತನ ಗಂಟಲು ದ್ರವ ವರದಿ ಬಂದಿದ್ದು ಆತನಿಗೆ ಕೋವಿಡ್-19 ಸೋಂಕು ತಗುಲಿಲ್ಲ ಎಂದು ದೃಢವಾಗಿದೆ.

ಪಂಜಾಬ್ ಮೂಲದವನಾಗಿರುವ 23 ವರ್ಷದ ಯುವಕನನ್ನು ಸೋಂಕು ಶಂಕೆಯಿಂದ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಆತನ ಮನೆಯವರು ಆಸ್ಪತ್ರೆಯ ವಿರುದ್ಧವೇ ದೂರು ದಾಖಲಿಸಿದ್ದಾರೆ. ತಮ್ಮ ಮಗನಿಗೆ ಆಸ್ಪತ್ರೆಯ ಸಿಬ್ಬಂದಿ ಸಾವಿನ ಭಯ ಮೂಡಿಸಿದ್ದಾರೆ. ಆತನನ್ನು ಭೇಟಿಯಾಗಲೂ ನಮಗೆ  ಅವಕಾಶ ನೀಡಿಲ್ಲ. ಇದೇ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next