Advertisement

Pune ಪೋರ್ಶೆ ಕಾರು ಅಪಘಾತ ಕೇಸು: ಇಬ್ಬರು ವೈದ್ಯರ ಸೆರೆ

01:19 AM May 28, 2024 | Team Udayavani |

ಪುಣೆ: ಇಬ್ಬರು ಅಮಾಯಕರನ್ನು ಬಲಿ ಪಡೆದುಕೊಂಡ ಪುಣೆ ಪೋರ್ಶೆ ಕಾರು ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಕನನ್ನು ರಕ್ಷಣೆಗೆ ನಡೆದಿರುವ ಸಂಚು ಒಂದೊಂದಾಗಿ ಬಹಿರಂಗಗೊಳ್ಳುತ್ತಿದೆ.

Advertisement

ಅಪಘಾತವಾದ ಬೆನ್ನಲ್ಲೇ ಆರೋಪಿಯ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದ ಸಸ್ಸೂನ್‌ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ವೈದ್ಯರೊಬ್ಬರನ್ನು ಸಾಕ್ಷ್ಯನಾಶದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅಪಘಾತ ನಡೆಸಿದ್ದ ಆರೋಪಿಯ ರಕ್ತದ ಮಾದರಿಯನ್ನು ಈ ವೈದ್ಯರು ಕಸದ ಬುಟ್ಟಿಗೆ ಎಸೆದು, ಅನಂತರ ಮದ್ಯ ಸೇವಿ ಸದೇ ಇದ್ದ ಆತನ ಗೆಳೆಯನ ರಕ್ತದ ಮಾದ ರಿಯನ್ನು ಆರೋಪಿಯದ್ದು ಎಂಬಂತೆ ಬಿಂಬಿಸಿ, ಎಫ್ಎಸ್‌ಎಲ್‌ ವರದಿ ನೀಡಿದ್ದರು ಎಂದು ಆರೋಪಿಸಲಾಗಿದೆ.

ಮತ್ತೊಮ್ಮೆ ರಕ್ತದ ಮಾದರಿ ಸಂಗ್ರಹ: ಪ್ರತ್ಯೇಕ ಆಸ್ಪತ್ರೆಯಲ್ಲಿ ಆರೋಪಿಯ ರಕ್ತಪರೀಕ್ಷೆ ಮತ್ತು ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ. ಆಗ ರಕ್ತದ ಮಾದರಿಯು ಪ್ರತ್ಯೇಕ ವ್ಯಕ್ತಿಯದ್ದು ಎನ್ನುವುದು ದೃಢಪಟ್ಟಿದೆ. ಈ ನಡುವೆ, ಚಾಲಕನನ್ನು ಕಿಡ್ನಾéಪ್‌ ಮಾಡಿ, ಬೆದರಿಕೆ ಹಾಕಿದ ಆರೋಪದಲ್ಲಿ ಜೈಲಲ್ಲಿರುವ ಆರೋಪಿ ತಂದೆಯನ್ನು ಹೆಚ್ಚಿನ ವಿಚಾರಣೆಗೆ ಕೋರ್ಟ್‌ ಪೊಲೀಸರ ವಶಕ್ಕೊಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next