Advertisement

ಪುಣೆ ಬಂಟರ ಸಂಘ ಉತ್ತರ:ಮಹಿಳಾ ವಿಭಾಗದಿಂದ ಅನಾಥಾಶ್ರಮಕ್ಕೆ ನೆರವು

03:34 PM Feb 23, 2019 | |

ಪುಣೆ: ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಫೆ. 17ರಂದು ವಡಗಾಂವ್‌ನಲ್ಲಿರುವ ಸರ್ವೇಶ್‌ ಸೇವಾ ಸಂಘ ಅನಾಥ ಮಕ್ಕಳ ಸಂಸ್ಥೆಗೆ  ದಿನನಿತ್ಯದ ಆಹಾರ ಬಳಕೆಯ ಸಾಮಗ್ರಿಗಳನ್ನು ವಿತರಿಸಲಾಯಿತು.

Advertisement

ಸಮಿತಿ ಸದಸ್ಯರು ಆಶ್ರಮದ ಮಕ್ಕಳೊಂದಿಗೆ ಕೆಲವು ಹೊತ್ತು ಕಾಲ ಕಳೆದರು. ಈ ಸಂದರ್ಭದಲ್ಲಿ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್‌ ಪೂಂಜಾ, ಉತ್ತರ ಪ್ರಾದೇಶಿಕ ಸಮಿತಿ ಸಮನ್ವಯಕರಾದ ಶೆಟ್ಟಿ ಕಳತ್ತೂರು, ರಘು ಬಿ. ಶೆಟ್ಟಿ, ಪ್ರಕಾಶ್‌ ಶೆಟ್ಟಿ, ಉದಯ್‌ ಶೆಟ್ಟಿ, ಸಮಿತಿ ಕಾರ್ಯಾಧ್ಯಕ್ಷೆ ಪ್ರಮೀಳಾ ಎಸ್‌. ಶೆಟ್ಟಿ, ಉಪ ಕಾರ್ಯಾಧ್ಯಕ್ಷ  ಪ್ರೇಮಾ ಆರ್‌.  ಶೆಟ್ಟಿ ಮತ್ತು  ರೇಣುಕಾ ಡಿ.  ಶೆಟ್ಟಿ, ಕಾರ್ಯದರ್ಶಿ ಅರುಣಾ ಆರ್‌.  ಶೆಟ್ಟಿ, ಕೋಶಾಧಿಕಾರಿ  ರಶ್ಮಿ ವಿ. ಭಂಡಾರಿ, ಜತೆ ಕಾರ್ಯದರ್ಶಿ ಸುಕನ್ಯಾ ಡಿ.  ಶೆಟ್ಟಿ,  ಜತೆ ಕೋಶಾಧಿಕಾರಿ  ರೇಖಾ ಎ.  ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ  ಶಕುಂತಲಾ ವಿ. ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷೆ ಶರ್ಮಿಳಾ ಪಿ. ಶೆಟ್ಟಿ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷೆಯಾಗಿ ಸರಿತಾ ವಿ. ಶೆಟ್ಟಿ ಹಾಗೂ ಜನಸಂಪರ್ಕಾಧಿಕಾರಿ ಸವಿತಾ ಆರ್‌. ಶೆಟ್ಟಿ, ಸುಪ್ರಿಯಾ ಎಸ್‌. ಶೆಟ್ಟಿ   ಉಪಸ್ಥಿತರಿದ್ದರು.

ಉತ್ತರ ಪ್ರಾದೇಶಿಕ ಸಮಿತಿ ಪ್ರತೀ ವರ್ಷ ಅನಾಥಾಶ್ರಮ, ವೃದ್ಧಾಶ್ರಮ, ವಿಕಲಾಂಗ ನೆರವು ಮುಂತಾದ  ಕಾರ್ಯಕ್ರಮಗಳನ್ನು ಶಿಕ್ಷಣ ಮತ್ತು ಸಾಮಾಜಿಕ ಸಮಿತಿಯ ಆಶ್ರಯದಲ್ಲಿ ನಡೆಸುತ್ತಾ ಬಂದಿದೆ.ಸಮಿತಿ ಸದಸ್ಯರೆಲ್ಲರೂ ಸಹಕಾರವನ್ನು ನೀಡಿ ಇಂತಹ ಸಾಮಾಜಿಕ ಕಾರ್ಯಗಳಿಗೆ ಪ್ರೋತ್ಸಾಹಿಸುತ್ತಾ ಬಂದಿ¨ªಾರೆ.

ಚಿತ್ರ-ವರದಿ:ಕಿರಣ್‌ ಬಿ. ರೈಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next