Advertisement

ಪುಣೆ ಬಂಟರ ಸಂಘ: ವಾರ್ಕರಿಗಳಿಗೆ ಆಹಾರ ಪದಾರ್ಥ ವಿತರಣೆ

05:41 PM Jun 28, 2019 | Vishnu Das |

ಪುಣೆ: ದೇಹುಗಾಂವ್‌ ಹಾಗೂ ಆಳಂದಿಯಿಂದ ಪಂಢರಾ ಪುರ ಯಾತ್ರೆಗಾಗಿ ಹೋರಾಟ ಸಂತ ಜ್ಞಾನೇಶ್ವರ ಹಾಗೂ ಸಂತ ತುಕಾರಾಮರ ಪಲ್ಲಕಿ (ಪಾಲ್ಕಿ ) ಪುಣೆ ನಗರಕ್ಕೆ ಬುಧವಾರ ಆಗಮಿಸಿತು.

Advertisement

ಸಾವಿರಾರು ಸಂಖ್ಯೆಯಲ್ಲಿ ಯಾತ್ರಾರ್ಥಿ ಗಳು (ವಾರ್ಕರಿಗಳು) ಪಲ್ಲಕಿಯೊಂದಿಗೆ ವಿಠಲ ನಾಮಸ್ಮರಣೆ ಯೊಂದಿಗೆ ಸಾಗುತ್ತಿದ್ದು, ಶಿವಾಜಿ ನಗರ ಮಾಡರ್ನ್ ಹೊಟೇಲ್‌ ಎದುರುಗಡೆ ಪುಣೆ ಬಂಟರ ಸಂಘದ ವತಿಯಿಂದ ವಾರ್ಕರಿಗಳಿಗೆ ಪಾನೀಯ, ಆಹಾರ ತಿನಿಸುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಉಪಾಧ್ಯಕ್ಷರಾದ ಸತೀಶ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್‌ ರಾಜ್‌ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್‌ ಪೂಂಜ, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ವಿನಯ್‌ ಜಿ. ಶೆಟ್ಟಿ, ಶಮ್ಮಿ ಎ. ಹೆಗ್ಡೆ, ದಿವ್ಯಾ ಎಸ್‌. ಶೆಟ್ಟಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದು ವಾರ್ಕರಿಗಳಿಗೆ ಆಹಾರ ವಿತರಿಸಿ ಶುಭಹಾರೈಸಿದರು.

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next