Advertisement

ಪುಲ್ವಾಮಾ ದಾಳಿ: ಪಾಕ್‌ ಪರ ಹೇಳಿಕೆಗಾಗಿ ಸಿಧು ಕಪಿಲ್‌ ಶೋದಿಂದ ಔಟ್‌

11:15 AM Feb 16, 2019 | Team Udayavani |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ 40 ಸಿಆರ್‌ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಪಾಕ್‌ ಜೆಇಎಂ ಉಗ್ರನ ಆತ್ಮಾಹುತಿ ದಾಳಿಯನ್ನು ಖಂಡಿಸಿಯೂ ಪಾಕ್‌ ಪರವಾಗಿ ಹೇಳಿಕೆ ನೀಡಿದ್ದ ಮಾಜಿ ಕ್ರಿಕೆಟಿಗ, ಹಾಲಿ ಪಂಜಾಬ್‌ ಸಚಿವ, ನವಜೋತ್‌ ಸಿಂಗ್‌ ಸಿಧು ಅವರನ್ನು ಕಪಿಲ್‌ ಶರ್ಮಾ ಅವರು ತನ್ನ ಜನಪ್ರಿಯ ಕಪಿಲ್‌ ಕಾಮಿಡಿ ಶೋದಿಂದ ಕಿತ್ತು ಬಿಸಾಕಿದ್ದಾರೆ ಎಂದು ವರದಿಗಳು ತಿಳಿಸಿವೆ. 

Advertisement

‘ಯಾವನೋ ಒಬ್ಬ ಉಗ್ರ ಮಾಡಿದ ದುಷ್ಕೃತ್ಯಕ್ಕೆ ಇಡಿಯ ಪಾಕಿಸ್ಥಾನವನ್ನು ಹೊಣೆ ಮಾಡುವುದು ಎಷ್ಟು ಸರಿ ?’ ಎಂದು ಹೇಳುವ ಮೂಲಕ ಸಿಧು, ಪಾಕ್‌ ಪರ ಬ್ಯಾಟಿಂಗ್‌ ಮಾಡಿದ್ದುದು ವ್ಯಾಪಕ ಟೀಕೆ, ವಿವಾದ, ಖಂಡನೆಗೆ ಗುರಿಯಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next