Advertisement

ಕಥುವಾ ರೇಪ್‌ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಭದ್ರತೆ: ಸುಪ್ರಿಂ ಆದೇಶ

06:59 PM Apr 16, 2018 | Team Udayavani |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಹೀರಾ ನಗರ ಪ್ರದೇಶದ ರಸ್ಸಾನಾದಲ್ಲಿ ಕಳೆದ ಜನವರಿ 10ರಂದು ನಡೆದಿದ್ದ 8ರ ಹರೆಯದ ಅಲೆಮಾರಿ ಸಮುದಾಯದ ಬಾಲಕಿಯ ಅಪಹರಣ, ರೇಪ್‌ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ಇಂದು ಜಮ್ಮು ಕಾಶ್ಮೀರ ಸರಕಾರದ ಉತ್ತರಕ್ಕಾಗಿ ನೊಟೀಸ್‌ ಜಾರಿ ಮಾಡಿದೆ. 

Advertisement

ಕಥುವಾ ಪ್ರಕರಣದ ಸಂತ್ರಸ್ತೆಯ ಕುಟುಂಬದವರಿಗೆ ಮತ್ತು ಅವರ ವಕೀಲೆ ದೀಪಿಕಾ ಎಸ್‌ ರಾಜಾವತ್‌ ಅವರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆಯನ್ನು ನೀಡುವಂತೆ ಸುಪ್ರೀಂ ಕೋರ್ಟ್‌ ಜಮ್ಮು ಕಾಶ್ಮೀರ ಸರಕಾರಕ್ಕೆ ಆದೇಶಿಸಿದೆ. 

ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಈ ಪ್ರಕರಣವು ನಿರ್ಭೀತ ಮತ್ತು ನ್ಯಾಯೋಚಿತ ವಿಚಾರಣೆಯನ್ನು ಕಾಣಲು ಇದನ್ನು ಜಮ್ಮು ಕಾಶ್ಮೀರದ ಹೊರಗೆ, ಸಾಧ್ಯವಾದಲ್ಲಿ ಚಂಡೀಗಢಕ್ಕೆ ವರ್ಗಾಯಿಸಬೇಕೆಂದು ರೇಪ್‌ ಸಂತ್ರಸ್ತೆಯ ತಂದೆ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದು ಈ ಬಗ್ಗೆಯೂ ಉತ್ತರಿಸುವಂತೆ ಜಮ್ಮು ಕಾಶ್ಮೀರ ಸರಕಾರಕ್ಕೆ ಸೂಚಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next