Advertisement

ಊಟ ಕೊಟ್ಟರೂ…ಮಾಸ್ಕ್ ಹಂಚಿದರು…

04:07 PM Mar 27, 2020 | Suhan S |

ಇಂಡಿ: ಕೋವಿಡ್ 19 ವೈರಸ್‌ ಹರಡುತ್ತಿರುವುದನ್ನು ತಪ್ಪಿಸುವ ಸಲುವಾಗಿ ಭಾರತ್‌ ಬಂದ್‌ ಮಾಡಲಾಗಿದ್ದು ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ, ಅನಾಥರಿಗೆ ಯುವಕರು ಸಹಾಯ ಮಾಡಲು ಮುಂದಾಗಿದ್ದಾರೆ.

Advertisement

ಉಡುಪಿ ಹೋಟೆಲ್‌ ಮಾಲೀಕ ಸುಭಾಸ್‌ ಶೆಟ್ಟಿ ತಮ್ಮ ಮನೆಯಲ್ಲೇ ಊಟ ತಯಾರಿಸಿ ಫುಟ್‌ಪಾತ್‌ ಮೇಲಿರುವ ಅನಾಥರಿಗೆ, ಬಡವರಿಗೆ ಬೆಳಗ್ಗೆ ಮತ್ತು ಸಾಯಂಕಾಲ ಎರಡು ಹೊತ್ತು ಊಟ ನೀಡುತ್ತಿದ್ದಾರೆ.

ಸಹಾಯ ಹಸ್ತ ಸೇವಾ ಸಮಿತಿ ಮತ್ತು ಪ್ರಾಣ ಸ್ನೇಹಿತರ ಬಳಗದ ಕಾರ್ಯಕರ್ತರು ಮತ್ತು ಮಂಗಳೇಶ್ವರಿ ಜನರಲ್‌ ಸ್ಟೋರ್ಸ್‌ ಮಾಲೀಕ ಸಂಜು ದಶವಂತ ಅವರು ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ. ಸಾಯಂಕಾಲ ಮತ್ತು ಬೆಳಗಿನ ಜಾವ ಬರುವ ವ್ಯಾರಸ್ಥರಿಗೂ ಮಾಸ್ಕ್ ವಿತರಣೆ ಮಾಡುತ್ತಿದ್ದುದಲ್ಲದೆ ಕೊರೊನಾ ವೈರಸ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಪುರಸಭೆಯ ಕಾರ್ಮಿಕರಿಗೂ ಉಚಿತ ಮಾಸ್ಕ್ ವಿತರಿಸಿದ್ದಾರೆ. ಈ ಯುವಕರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಣ್ಯ ವ್ಯಾಪಾರಸ್ಥರಾದ ಸಂತೋಷ ಕೋಟಿ, ನೇಮಿನಾಥ ಕೋಟಿ, ಡಾ| ರಮೇಶ ಪೂಜಾರಿ, ಶ್ರೀಧರ ಕ್ಷತ್ರಿ ಅವರು ಪೊಲೀಸ್‌ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಉಪಾಹಾರ, ಜ್ಯೂಸ್‌ ವಿತರಣೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next