Advertisement

ಕೇಂದ್ರ  ಸರಕಾರದ ವಿರುದ್ಧ ಪ್ರತಿಭಟನೆ

03:35 PM Feb 24, 2017 | Team Udayavani |

ಕೈಕಂಬ: ಗುರುಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ವತಿಯಿಂದ ಕೇಂದ್ರ ಸರಕಾರದ ಜನವಿರೋಧಿ ನೀತಿಗೆ ವಿರುದ್ಧ ಪ್ರತಿಭಟನೆ ಹಾಗೂ ಜನವೇದನ ಕಾರ್ಯಕ್ರಮ ಗುರುಪುರ ಕೈಕಂಬ ಜಂಕ್ಷನ್‌ ಬಳಿ ಗುರುವಾರ ನಡೆಯಿತು.

Advertisement

ಶಾಸಕ ಬಿ. ಎ. ಮೊದಿನ್‌ ಬಾವಾ ಮಾತನಾಡಿ,  ಬಡವರಿಗೆ ಅಶ್ವಾಸನೆ ಕೊಟ್ಟು ಅಧಿಕಾರಿಕ್ಕೆ ಬಂದ ಬಿಜೆಪಿಯ ಮೋದಿ ಸರಕಾರ ಜನ ಸಾಮಾನ್ಯರ ಬದುಕಿನಲ್ಲಿ ಮಕ್ಕಳಾಟಿಕೆ ಮಾಡುತ್ತಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಅವರಿಗೆ ಮತದಾರರು  ಬುದ್ಧಿ ಕಲಿಸಲಿದ್ದಾರೆ ಎಂದು  ಹೇಳಿದರು.
ಮೇಕ್‌ಇನ್‌ ಇಂಡಿಯಾದಿಂದ ಉದ್ಯೋಗ ನೀಡಿವುದಾಗಿ ಭರವಸೆ ನೀಡಿದ್ದ ಮೋದಿ ಯಾರಿಗಾದರೂ ಅದರಿಂದ ಉದ್ಯೋಗ ನೀಡಿದ್ದಾರೋ ಎಂದು ಅವರು ಪ್ರಶ್ನಿಸಿದರು.
 
ಡಾ| ಶೇಖರ್‌ ಪೂಜಾರಿ, ಎಡಪದವು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ನೀಲಯ ಎಂ.ಅಗರಿ, ಗುರುಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಆರ್‌.ಕೆ.ಪೃಥ್ವೀರಾಜ್‌, ಜಿ. ಪಂ. ಸದಸ್ಯ ಯು.ಪಿ.ಇಬ್ರಾಹಿಂ, ತಾ. ಪಂ.  ಸದಸ್ಯರಾದ  ಸಚಿನ್‌ ಕುಮಾರ್‌, ಸುನಿಲ್‌, ಸಮದ್‌, ಶ್ರೀಧರ್‌, ಅಪ್ಸ್‌ತ್‌, ಮಾಜಿ ಜಿ. ಪಂ. ಸದಸ್ಯರಾದ ಮೆಲ್ವಿನ್‌ ಡಿ’ ಸೋಜಾ ,ಕೃಷ್ಣ ಅಮೀನ್‌,ಕಂದಾವರ ಗ್ರಾಮ ಪಂಚಾಯತ್‌ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ,ಪಡುಪೆರಾರ ಗ್ರಾಮ ಪಂಚಾಯತ್‌ ಅಧ್ಯಕ್ಷೆ  ಶಾಂತ,ಕುಪ್ಪೆಪದವು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಲೀಲಾವತಿ,ಗುರುಪುರ ಗ್ರಾಮ ಪಂಚಾಯತ್‌ ಅಧ್ಯಕ್ಷೆ  ರುಕಿಯಾ,ಗಂಜಿಮಠ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಆರ್‌.ಎಸ್‌.ಝಕೀರ್‌,ಜಯಶೀಲ ಅಡ್ಯಂತಾಯ,ಸುರೇಂದ್ರ ಕಂಬಳಿ,ದೇವೇಂದ್ರ,ಅಬ್ದುಲ್‌ ಅಝೀಝ್ ಬಾಷಾ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next